ಇತ್ತೀಚಿಗೆ ಹಿಂದಿಯಲ್ಲಿ ತೆರೆ ಕಂಡ ಅಂಜಾನ-ಅಂಜಾನಿ ಚಿತ್ರದ ಪದ್ಯದ ದ್ರಶ್ಯ ಗಳನ್ನೊಮ್ಮೆ ನೆನಪು ಮಾಡಿಕೊಳ್ಳಿ, ಅದರ ಪದ್ಯ ಒಂದರಲ್ಲಿ ನಾಯಕ ರಣಬೀರ್ ಮತ್ತು ನಾಯಕಿ ಪ್ರಿಯಾಂಕ , ಅಮೇರಿಕಾದ ತೀರಾ ಹಳ್ಳಿಯೊಂದರಲ್ಲಿ ಕಾರಿನಲ್ಲಿ ಹೋಗುವ ದೃಶ್ಯವಿದೆ; ಸುತ್ತ ಮುತ್ತ ಬರೇ ಬೆಟ್ಟ ಗುಡ್ಡಗಳೇ ತುಂಬಿರುವ ಆ ಹಳ್ಳಿಯ ರಸ್ತೆಯನ್ನು ಒಮ್ಮೆ ಸರಿಯಾಗಿ ಗಮನಿಸಿ, ಸತ್ಯ ಹೇಳುತ್ತೇನೆ ನಮ್ಮ ದೇಶದ ಮಹಾ ನಗರಗಳಲ್ಲೇ ಅಷ್ಟು ಚಂದದ ರಸ್ತೆ ಕಾಣುವುದಿಲ್ಲ. ನಮ್ಮ ದೇಶಕ್ಕೆ ಯಾಕೆ ಈ ದುರವಸ್ಥೆ ? ನಮ್ಮ ದೇಶದ ರಸ್ತೆಗಳು ಯಾಕೆ ಈ ರೀತಿ ಇದೆ? ನಮ್ಮ ರಸ್ತೆಗಳಲ್ಲಿ ಮನುಷ್ಯರು ಹೋಗುವ ಬದಲಾಗಿ ಹೆಣ ಸಾಗಿಸುವುದೇ ಉತ್ತಮ.

ಹಾಗೇ ಸುಮ್ಮನೆ- ಭಾರತೀಯ ರಸ್ತೆಗಳ ಬಗ್ಗೆ ಉಮೆಶನಲ್ಲಿ ಕೇಳಿದಾಗ ಆತನ ಕಣ್ಣಲ್ಲಿ ನೀರು ಬಂತು. ಸರಿಯಾಗಿ ವಿಚಾರಿಸಿದಾಗ ತಿಳಿಯಿತು ಉಮೇಶನ ತಂದೆ ಇಂತದೆ ಕುಲಗೆಟ್ಟ ರಸ್ತೆಯೊಂದರಲ್ಲಿ ಪ್ರಯಾಣಿಸುತ್ತಿರುವಾಗ, ಕುಲುಕಾಡಿ ಕುಲುಕಾಡಿ ಕಿಡ್ನಿ ಹೊರ ಬಿದ್ದು ಸತ್ತದ್ದಂತೆ.
ಡಾ.ಶೆಟ್ಟಿ
No comments:
Post a Comment