Friday, January 28, 2011

ಖೈದಿಗಳಿಗೂ ಬಂತು ಸವಲತ್ತು 
ರಾಜ್ಯದ 4 ಕಡೆ ಬಯಲು ಬಂದಿಖಾನೆ ನಿರ್ಮಾಣ ಮಾಡಲಾಗುವುದು ಎಂದು ಬಂದಿಖಾನೆ ಸಚಿವ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.
ಈ ಮೂಲಕ ಖೈದಿಗಳಿಗೆ ಸವಲತ್ತು ದೊರೆತಂತಾಗಿದೆ, ಹೇಗೆಂದರೆ ಈಗಾಗಲೇ ದೇವನಹಳ್ಳಿಯ ಬಳಿ ಇರುವ ಬಯಲು ಬಂದಿಖಾನೆಯಲ್ಲಿ, ಖೈದಿಗಳಿಗೆ ಸ್ವಾವಲಂಬಿಯಾಗಿ ಜೀವನ ನಡೆಸಲು ಅವಕಾಶವಿದೆ. ಇಲ್ಲಿ ಸ್ವತಂತ್ರವಾಗಿ ಇರಬಹುದು, ಇಂತಹ ಬಂದಿಖಾನೆಗಳು ಇತರ ಜೈಲುಗಳಿಗೆ ಮಾದರಿ. ಇವು ಇನ್ನಷ್ಟು ರಚನೆಯಾಗಬೇಕು, ಯಾಕೆಂದರೆ ಖೈದಿಗಳನ್ನು ಜೈಲಿನಲ್ಲಿ ಮೃಗಗಳಂತೆ ನಡೆಸಿಕೊಂಡರೆ; ಅವರು ಬದಲಾಗುವ ಸಾಧ್ಯತೆ ಕಡಿಮೆ.
ಜೈಲುಗಳು ಹೇಗಿರಬೇಕೆಂದರೆ, ಖೈದಿಯೊಬ್ಬ ತಪ್ಪು ಮಾಡಿ ಜೈಲು ಸೇರಿಕೊಂಡರೆ, ಅಲ್ಲಿ ಆತ ಸಂಪೂರ್ಣವಾಗಿ ಬದಲಾಗಬೇಕು. ಆತನಿಗೆ ಒಳಿತು-ಕೆಡುಕುಗಳು ಚೆನ್ನಾಗಿ ಅರ್ಥವಾಗಬೇಕು, ಶಿಕ್ಷೆಯನ್ನು ಮುಗಿಸಿಕೊಂಡು ಹೊರಬರುವಾಗ ಉತ್ತಮ ಪ್ರಜೆಯಾಗಿರಬೇಕು. 
ಬಯಲು ಬಂದಿಖಾನೆಗಳಿಂದ ಈ ಕೆಲಸ ಸಾಧ್ಯವಾಗುತ್ತದೆ, ಯಾಕೆಂದರೆ ಅಲ್ಲಿ ಖೈದಿಗಳಿಗೆ ಮನೆಯಂತಹ ವಾತಾವರಣ ಇರುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಕೆಲಸ ಮೆಚ್ಚಬೇಕಾದದ್ದು. 
ಹಾಗೇ ಸುಮ್ಮನೆ- ಬಯಲು ಬಂದಿಖಾನೆ ಸವಲತ್ತಿನ ಬಗ್ಗೆ ಕೇಳಿದ ಉಮೇಶ, ತನ್ನ ಮನೆಗಿಂತ ಜೈಲೇ ಎಷ್ಟೋ ವಾಸಿ. ಮನೆಯಲ್ಲಿ ಹೆಂಡತಿಯ ಗುಲಾಮನಾಗಿ ಬದುಕುದಕ್ಕಿಂತ ಬಂದಿಖಾನೆಯಲ್ಲಿ ಸ್ವಾವಲಂಬಿಯಾಗಿರಬಹುದು ಅನ್ನುತ್ತಿದ್ದಾನೆ.
                                                                       -ಡಾ.ಶೆಟ್ಟಿ 

No comments:

Post a Comment