ಕಣ್ಣಿದ್ದು ಕುರುಡರಾಗಬೇಡಿ...
ವಿಕಲಚೇತನರ ಕಾಳಜಿ ಬಗ್ಗೆ ಟೆಂಡರ್ ನಲ್ಲಿ ಆದೇಶ ನೀಡಿದ, ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಕೋದಂಡ ರಾಮಯ್ಯ ಅವರಿಗೆ ಹೃದಯಪೂರ್ವಕ ವಂದನೆಗಳು.
ವಿಕಲಚೇತನರ ಬಗ್ಗೆ ಅಸಡ್ಡೆ ತೋರುವುದನ್ನು ನಾನು ಪ್ರತ್ಯಕ್ಷವಾಗಿ ನೋಡಿದ್ದೇನೆ, ಇತರರ ಹಾಗೆ ಅವರು ಕೂಡ ಹತ್ತು ಹಲವು ಆಸೆ ಆಕಾಂಕ್ಷೆಗಳನ್ನು ಹೊತ್ತು ಬಂದಿರುತ್ತಾರೆ. ಅವರೊಂದಿಗೆ ನಮ್ಮ ಸ್ವಾರ್ಥ ಸಲ್ಲದು
ಹುಟ್ಟು ಕುರುಡು, ಅಪಘಾತ ಇತ್ಯಾದಿ ಅಂಗ ಊನತೆಯಿಂದ ಬಳಲುವ ಇವರಿಗೆ, ಕಾಲೇಜುಗಳಲ್ಲಿ ಅನುದಾನ ಇತ್ಯಾದಿಗಳನ್ನು ತೋರದೆ ಇರುವುದು ನಿಜವಾಗಿ ನಮ್ಮ ಕುರುಡುತನವಾಗುತ್ತದೆ. ಹೀಗಾಗಿ ವಿಕಲಚೇತನರಿಗಾಗಿ ಸ್ಪೂರ್ತಿದಾಯಕವಾಗುವ ಯೋಜನೆಗಳನ್ನು ರೂಪಿಸಿದಕ್ಕಾಗಿ ನಮ್ಮಲ್ಲಿ ಧನ್ಯತಾಭಾವವಿದೆ.
ತಮ್ಮ ತಮ್ಮ ವಿಚಾರ ಗಳಿಗೆ ಅನುಗುಣವಾಗಿ, ಸ್ವಂತ ಒಳಿತಿಗಾಗಿ ದುಡಿಯುವ ಎಲ್ಲಾ open hearted people ಗಳಿಗೆ ಈ ಮಾತು ತಟ್ಟಲಿ. ನಾವು ವಿದ್ಯಾರ್ಥಿಗಳನ್ನು terrorize ಮಾಡುವುದಿಲ್ಲ ಎನ್ನುವವರು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಿ.
ಕೆ.ಪಿ.ಭಟ್
No comments:
Post a Comment