Tuesday, January 18, 2011

 'ಬೈ-ಪಾಸ್ ಸರ್ಜರಿ ಅಗತ್ಯ' 
ಮೈಸೂರು-ಮಾಣಿ ರಾಜ್ಯ ಹೆದ್ದಾರಿಯ ವಿಸ್ತರಣಾ ಕಾರ್ಯ ಕೆಲ ತಿಂಗಳುಗಳಿಂದ ನಡೆಯುತ್ತಿದೆ. ಆದರೆ ಈ ಕಾಮಗಾರಿಯು ಅವ್ಯವಸ್ಥೆಯ ಆಗರವಾಗಿದೆ. 
ಪುತ್ತೂರು ಬೈ-ಪಾಸ್ ಮೂಲಕ ಹಾದು ಹೋಗುವ ಈ ರಸ್ತೆಯ ಕಾಮಗಾರಿ ನಡೆಯುತ್ತಿರುವ  ಸ್ಥಳಗಳಲ್ಲಿ, ಕೆಲವೆಡೆ ಎಚ್ಚರಿಕೆಯ ಫಲಕಗಳು ಇದ್ದರೆ,ಇನ್ನೂ ಕೆಲವೆಡೆ ಇದು ಮಾಯವಾಗಿದೆ. ದಿನನಿತ್ಯ ಸಾವಿರಾರು ವಾಹನಗಳು ಹಾದು ಹೋಗುವ ಇಲ್ಲಿ ಸೂಚನಾ ಫಲಕಗಳನ್ನು ಸರಿಯಾಗಿ ಅಳವಡಿಸದೆ ಇರುವುದು ಕಾಮಗಾರಿಯ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ. 
ಇಲ್ಲಿ ರಾತ್ರಿ ಹೊತ್ತು ಸಂಚರಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು, ತಪ್ಪಿದಲ್ಲಿ 3 ಅಡಿ ಆಳದ ಗುಂಡಿಗೆ ಬೀಳುವುದರಲ್ಲಿ ಸಂಶಯವಿಲ್ಲ. ಅಧಿಕಾರಿಗಳು ಇತ್ತ ಗಮನ ಹರಿಸಿದರೆ ಸಂಭವನೀಯ ಅಪಾಯವನ್ನು ತಪ್ಪಿಸಬಹುದು.
                                                                    -ಪ್ರತಿನಿಧಿ  

No comments:

Post a Comment