Wednesday, January 26, 2011

ಇಂದು 62 ನೇ ಗಣರಾಜ್ಯೋತ್ಸವ. 1950 ರಿಂದ ಇವತ್ತಿನವರೆಗೆ ದೇಶ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ತಾಂತ್ರಿಕವಾಗಿ , ಇನ್ನೂ ಹಲವು ಕ್ಷೇತ್ರಗಳಲ್ಲಿ ಬಹಳಷ್ಟು ಬದಲಾವಣೆಯನ್ನು ಕಂಡಿದೆ. ಅವತ್ತಿಂದ ಇವತ್ತಿನ ವರೆಗಿನ ಇತಿಹಾಸದಲ್ಲಿ ಜನತೆ ಹಲವು ಸಿಹಿ ಹಾಗೂ ಕಹಿ ಘಟನೆಗಳನ್ನು ದೇಶದಲ್ಲಿ ಕಂಡಿದ್ದಾರೆ. ಸಿಹಿ ನಮ್ಮ ಬೆಳವಣಿಗೆಯಾದರೆ ಕಹಿ ಬೆಳವಣಿಗೆಗೆ ಪೂರಕವಾದ ಪಾಠ. ಅದೆಷ್ಟೋ  ಬದಲಾವಣೆಗಳೊಂದಿಗೆ ಬದಲಾವಣೆಗೆ ಹೊರತಾಗಿ ನಿಂತಿರುವುದು ಎಂದರೆ ನಮ್ಮ ರಾಜಕಾರಣ. ಸದಾ ಕೊಳ್ಳೆ ಹೊಡೆಯೋ ರಾಜಕಾರಣಿಗಳು ಹಾಗೂ ಅವರನ್ನು ಉಗಿಯೋ ನಾವು.  
ನಮ್ಮ ಓದುಗರಿಗೆ 62 ನೇ ಗಣರಾಜ್ಯೋತ್ಸವದ ಶುಭಾಶಯಗಳು. ಮುಂದಾದರೂ ದೇಶದ ರಾಜಕಾರಣದಲ್ಲಿ ತ್ವರಿತ ಬದಲಾವಣೆ ಆಗಿ ದೇಶ ಅತ್ಯುಚ್ಚ ಸ್ಥಾನಕ್ಕೆ ಏರಲಿ ಎಂದು ಆಶಿಸೋಣ. 
ಭಾರತ್ ಮಾತಾ ಕೀ ಜೈ 

No comments:

Post a Comment