Friday, April 1, 2011

ಪಾಠವಾಗಲಿ ತೀರ್ಪು... 
ಬಾಲಿವುಡ್ ಎಂಬ ಮಾಯಾ ಲೋಕದಲ್ಲಿ ಎಲ್ಲಾ ರೀತಿಯ ಜನರು ಸಿಗುತ್ತಾರೆ. ಉತ್ತಮರು, ಅಧಮರು, ಸಾಧುಗಳು ಹೀಗೆ ಎಲ್ಲಾ ರೀತಿಯ character ಗಳನ್ನೂ ನೀವು ಒಂದೇ ಕಡೆ ನೋಡಬೇಕೆಂದರೆ ಬಾಲಿವುಡ್ ಅನ್ನು ನೋಡಬೇಕು. ನಾನು ಈಗ ಹೇಳ ಹೊರಟಿರುವುದು ಉತ್ತಮರ ಬಗ್ಗೆ ಅಲ್ಲ, ಅಧಮನೊಬ್ಬನ ಬಗ್ಗೆ. ಮನೆ ಕೆಲಸದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿರುವ ಭೂಪನ ಬಗ್ಗೆ! ನಿಮಗೆ ಈಗಾಗಲೇ ಗೊತ್ತಾಗಿರಬಹುದು ಯಾರೆಂದು, ಅವನೇ ಶೈನಿ ಅಹುಜಾ ಎಂಬ ಉದಯೋನ್ಮುಕ ನಟ. ಮಾಜಿ ಸೈನ್ಯಾಧಿಕಾರಿಯ ಮಗನಾದ ಈತ, ಕಲಿತದ್ದೆಲ್ಲ ಸೈನ್ಯದ ಶಾಲೆಯಲ್ಲಿಯೇ, ಬಾಲ್ಯದಲ್ಲಿ ಸೈನ್ಯಕ್ಕೆ ಸೇರಬೇಕು ಎಂಬ ಆಸೆ ಹೊತ್ತುಕೊಂಡಿದ್ದ ಇವನು ಅದ್ಯಾವ ದುರಾದೃಷ್ಟಕ್ಕೆ ಬಾಲಿವುಡ್ ಎಂಟ್ರಿಯಾದನೋ ಏನೋ ಪಾಪ!
ಕಳೆದ 2009 ರಲ್ಲಿ ಶೈನಿ ಅಹುಜಾ, ಆತನ ಮನೆ ಕೆಲಸದ ಹುಡುಗಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಮಾಡಿದ್ದಳು. ಪೊಲೀಸರು ಆತನನ್ನು ಬಂಧಿಸಿದ್ದರು, ನಂತರ ಜಾಮೀನು ಪಡಕೊಂಡು ಹೊರಬಂದಿದ್ದ ಶೈನಿಗೆ, ಈಗ ಕೋರ್ಟ್ 7 ವರ್ಷ ಸಜೆ ನೀಡಿದೆ. ಈ ಮೂಲಕ ಶೈನಿಗೆ ಜೈಲಿನ ಊಟ ಗ್ಯಾರಂಟಿ ಆಗಿದೆ. 
ಶೈನಿಗೆ ದೊರೆತ ಈ ಶಿಕ್ಷೆ ಇತರರಿಗೂ ಪಾಠವಾಗಲಿ. ಬಡತನದ ಕಾರಣದಿಂದ ಮನೆಕೆಲಸ ಮಾಡಿ ಹೊಟ್ಟೆ ತುಂಬಿಸುವ ಹುಡುಗಿಯರನ್ನು, ಪುಸಲಾಯಿಸಿಯೋ, ದೌರ್ಜನ್ಯ ಮಾಡಿಯೋ ಬಳಸಿಕೊಳ್ಳುವವರಿಗೆ ಈ ತೀರ್ಪು ಎಚ್ಚರಿಕೆಯ ಘಂಟೆಯಾಗಲಿ.
ಹಾ'ಗೇ' ಸುಮ್ಮನೆ- ಶೈನಿಯ ಕಥೆ ಕೇಳಿದ ಉಮೇಶ, ಇನ್ನು ಮುಂದೆ ಮನೆ ಕೆಲಸಕ್ಕೆ ಹುಡುಗರನ್ನು ಇಡಬೇಕು ಎನ್ನುತ್ತಿದ್ದಾನೆ. ಹಾ'ಗೇ'  ಮಾಡಿದರೆ, ಹೀ'ಗೇ' ಆಗಲಿಕ್ಕಿಲ್ಲ ಎನ್ನುವುದು ಉಮೇಶನ ಅಭಿಪ್ರಾಯ.
                                             -ಡಾ.ಶೆಟ್ಟಿ 
ಎಲ್ಲ ಮುಗಿದಿದೆ. ಮತ್ತೊಂದು ಕನಸಿನ ಆರಂಭದೊಂದಿಗೆ 
ಒಂದೇ ಭಾರತ, ಒಂದೇ ಕನಸು, ಒಂದೇ ಭಯ ಒಂದೇ ಕುತೂಹಲ, ಒಂದೇ ಗುರಿ. ಇದು ನಿನ್ನೆ ಬಿಕೋ ಎನ್ನುತ್ತಿದ್ದ ಎಲ್ಲಾ ಬೀದಿಗಳ, ಎಲ್ಲಾ ಕಂಪೆನಿಗಳ ಎಲ್ಲ ಶಾಲಾ ಕಾಲೇಜುಗಳ ಮೌನದಲ್ಲಿದ್ದ ಒಂದೇ ಮಾತು. ಇತಿಹಾಸಕ್ಕೂ ಮೀರಿದ ಭಾರತ-ಪಾಕ್ ನಡುವಿನ ಕ್ರಿಕೆಟ್ ಪಂದ್ಯದ ಒಂದೇ ಉದ್ದೇಶ. 
ಮೊನ್ನೆ ಗಂಟೆ 2:30 ಯಿಂದ ಶುರುವಾದ ಪಂದ್ಯ, ಸೆಹ್ವಾಗ್ ಅನ್ನೇ ಟಾರ್ಗೆಟ್ ಎಂದು ಹೇಳಿಕೆ ನೀಡಿದ ಉಮ್ಮರ್ ಗುಲ್ ಬೌಲಿಂಗ್ ಅನ್ನು ಎಂದೂ ಯಾರೂ ಕೇಳರಿಯದಂತೆ  ಚಚ್ಚುವ ಮೂಲಕ ಪಾಕಿ Main seamer ನ ಕಾನ್ಫಿಡೆನ್ಸ್ ಕೆಳಗೆ ತಳ್ಳಿ ಅಫ್ರಿದಿಯನ್ನು ತಡಕಾಡುವಂತೆ  ಮಾಡಿ ಇನ್ನೇನು ಪಂದ್ಯ  One sided ಆಗಬಹುದೇ ಎಂಬ ಊಹೆ ಭಾರತೀಯರ ಮನದಲ್ಲಿ ಮೂಡುವ ಸಮಯಕ್ಕೆ ವಹಾಬ್ ನ ಮಾರಕ ಎಸೆತಕ್ಕೆ  ಎಲ್.ಬಿ ಯಾಗಿ ನಿರ್ಗಮಿಸಿದ ಸೆಹ್ವಾಗ್ ಜೊತೆ  One sided  ಪಂದ್ಯವೂ ಕೂಡ ಪೆವಿಲಿಯನ್ ಅಲ್ಲಿ ಕುಳಿತು ಮ್ಯಾಚ್ ವೀಕ್ಷಣೆ ಗೈಯ್ಯಲು ಪ್ರಾರಂಭಿಸಿತ್ತು ಎನ್ನಬಹುದು. ಮತ್ತೆ ಆರಂಭವಾಗಿತ್ತು Tension situation ಸದಾ ವಿಕೆಟ್ ಉರುಳುತ್ತಾ, ಸಣ್ಣ ಸಣ್ಣ Partnership ಜತೆಗೊಳ್ಳುತ್ತಾ ಭಾರತ 260 ರನ್ ಗಡಿ ತಲುಪಿತ್ತು.
ಕ್ರಿಕೆಟ್ ಆರಾಧ್ಯ ದೈವ ಸಚಿನ್ 85 ಮೌಲ್ಯಯುತವಾದ ರನ್ ಗಳಿಸಿ ಭಾರತವನ್ನು ಸುಸ್ಥಿತಿಯ ದಾರಿಗೆ ಹಾಕುವ ಸತತ ಪ್ರಯತ್ನ ಮಾಡುವಲ್ಲಿ 5 ಜೀವದಾನವನ್ನು ಪಡೆದರೆ, ಒಟ್ಟಾರೆಯಾಗಿ ಪಾಕಿಗಳು 6 ಕ್ಯಾಚ್ ಡ್ರಾಪ್ ಮಾಡಿ, ಅತ್ಯಂತ ಕಳಪೆ ಫೀಲ್ಡಿಂಗ್ ಪ್ರದರ್ಶನ ತೋರಿ ನಮಗೆ ಗುರಿ ತಲುಪುವಲ್ಲಿ ಸ್ವಲ್ಪ ಸಹಕಾರಿಯಾದರು  ಎಂದರೂ ತಪ್ಪಲ್ಲ. 
ತದನಂತರ ಶುರುವಾಗಿತ್ತು ವಾಸ್ತವ ಯುದ್ದ. ಬ್ಯಾಟ್ ಹಿಡಿದು ಪಾಕಿಗಳು ಭಾರತೀಯ   ಬೌಲರ್ ಗಳನ್ನೂ ದಂಡಿಸಲು ಪ್ರಾರಂಭಿಸಿದಾಗ, ಈ ಬಾರಿ ನಿರೀಕ್ಷೆ ಹುಸಿಯಾಗುತ್ತೋ ಎಂಬ ಗೊಂದಲ ಭಯ, ನೀರವ ಮೌನ. ಆದರೆ ಛಲ ಬಿಡದ ಭಾರತದ ಜಾಹಿರ್ ಖಾನ್ ಮೊದಲ ವಿಕೆಟ್ ಉರುಳಿಸುವ  ಮೂಲಕ ಭಾರತಕ್ಕೆ ಹೊಸ ಹುರುಪನ್ನು ನೀಡಿದರು. ಮುಂದೆ Regular intervals of time ನಲ್ಲಿ ಪಾಕಿ ವಿಕೆಟುಗಳನ್ನು ಉರುಳಿಸಿ, ಯಾವ ಬ್ಯಾಟ್ಸ್ ಮ್ಯಾನ್ ಗಳೂ ಸರಿಯಾದ Partnership ಮಾಡಲಾಗದಂತೆ ಭಾರತೀಯ ಬೌಲರ್ ಗಳು ಲೈನ್ ಅಂಡ್ ಲೆಂಥ್ ನಲ್ಲಿ ಬೌಲಿಂಗ್ ಮಾಡಿ ಗೆಲುವಿನ ಹಾದಿ ಸುಗಮವಾಗುವಂತೆ ಮಾಡಿದರು. 
ಮಿಸ್ಬಾ ಮತ್ತು ಅಕ್ಮಲ್ ಎಷ್ಟು ಪ್ರಯತ್ನ ಪಟ್ಟರೂ ಪಾಕ್ ಕೊನೆಗೆ ತನ್ನ ಸೋಲನ್ನು ಒಪ್ಪಿಕೊಳ್ಳ ಬೇಕಿತ್ತು. ಮಿಸ್ಬಾನ ವಿಕೆಟ್ ನೊಂದಿಗೆ ಭಾರತೀಯರ ಕನಸು ನನಸಾಗಿತ್ತು. ಅಬ್ಬಬ್ಬಾ! ಅದೆಂತಹ ರೋಮಾಂಚನದ ಕ್ಷಣ. ಕೊನೆಗೂ ಇತಿಹಾಸ ಮರುಕಳಿಸಿಯೇ ಬಿಟ್ಟಿತು. ಪಾಕ್ ಭಾರತದ ಎದುರು ಸೋತೆ ಬಿಟ್ಟಿತು. 
Democracy ವ್ಯವಸ್ಥೆಯಲ್ಲಿ 100 ಕೋಟಿ ಭಾರತೀಯ ಜನತೆ 200 ಕೋಟಿ  ಕನಸುಗಳನ್ನು ಕಾಣುವ ನಮ್ಮ ಜನ, ಒಂದೇ ಕನಸು ಕಾಣುವುದೆಂದರೆ! ಎಷ್ಟೊಂದು ಆನಂದ? ಈಗ ಎಲ್ಲ ಮುಗಿದಿದೆ. ಮತ್ತೊಂದು ಕನಸಿನ ಆರಂಭದೊಂದಿಗೆ. 
Best of luck India. For India vs Srilanka Match                                
                                                              -ಡಾ.ಶ್ರೇ.