Thursday, January 27, 2011

ವೈ. ಎನ್. ಕೆ. ನೆನಪು 
ಅರವತ್ತರ ದಶಕದಲ್ಲಿ ಕನ್ನಡದ ಪತ್ರಿಕೋದ್ಯಮದ ಸ್ಪೂರ್ತಿ ಎಂದರೆ ವೈ.ಎನ್.ಕೆ. ಅವರು. ಇವರ ಬರಹದಲ್ಲಿ ವಿಶಿಷ್ಟ ಛಾಪನ್ನು ಕಾಣಬಹುದು. ತರುಣರಿಗೆ ಪ್ರೋತ್ಸಾಹ ನೀಡುವ ಜೊತೆಗೆ ಇವರ ಲೇಖನಗಳು ಪತ್ರಿಕೋದ್ಯಮದಲ್ಲಿ ಆಸಕ್ತಿಯನ್ನು ಮೂಡಿಸುತ್ತದೆ.
ಪ್ರಜಾವಾಣಿ ಪತ್ರಿಕೆಯ ಆಧಾರವಾಗಿದ್ದ ಇವರು, ಪದಗಳಲ್ಲಿ ಮೋಡಿ ಮಾಡುತ್ತಿದ್ದರು, ಇವರ ಬರವಣಿಗೆಗಳು ಜನರ ಮನಸ್ಸಿಗೆ ತಟ್ಟುತಿತ್ತು. ರವಿಬೆಳಗೆರೆ, ವಿಶ್ವೇಶ್ವರ ಭಟ್ ನಂತಹ ಪತ್ರಕರ್ತರಿಗೆ ಇವರೇ ಸ್ಪೂರ್ತಿ.
ತಾವು ಇರುವ ಊರನ್ನೇ ಸರಿಯಾಗಿ ಸುತ್ತದೆ, ಇನ್ಯಾವುದೋ ಊರಿನ ಬಗ್ಗೆ ವ್ಯಂಗ್ಯದ ಬರಹಗಳನ್ನು ಬರೆಯುವ ಈಗಿನ ಪತ್ರಕರ್ತರಿಗೆ ಇವರು ಮಾದರಿಯಾಗಬೇಕು. ಕಾರಣ ಪ್ರಪಂಚ ಪರ್ಯಟನೆ ಮಾಡಿದ ಕೆಲವೇ ಕೆಲವು ಕನ್ನಡ ಪತ್ರಕರ್ತರಲ್ಲಿ ವೈ.ಎನ್.ಕೆ ಒಬ್ಬರು.
ತಮಗೆ ದೊರೆತ ಒಂದೊಂದು ತುಣುಕನ್ನು ಸ್ವಾರಸ್ಯಕರವಾಗಿ ನಿರೂಪಿಸುವಲ್ಲಿ ಇವರದ್ದು ಎತ್ತಿದ ಕೈ.
                                                                                  ಕೆ.ಪಿ.ಭಟ್ 

No comments:

Post a Comment