ತೊಗಡಿಯರಿಗೊಂದು ಸಲಹೆ
ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಡಾ.ಪ್ರವೀಣ್ ಭಾಯಿ ತೊಗಡಿಯರವರೆ ಇತ್ತೀಚೆಗೆ ಗೋ ಶ್ಯಾಂಪು ಖರೀದಿಸಿ, ಗೋ ಹತ್ಯೆ ನಿಷೇಧಿಸಿ ಎಂದು ಹೇಳಿದ್ದು ಇನ್ನು ನನ್ನ ಕಿವಿಯ ಮೇಲೆ ರಿಂಗಣಿಸುತ್ತಲೇ ಇದೆ.ಹಿಂದೂ ಒಬ್ಬ ಮನುಷ್ಯನನ್ನು ಕೊಲೆ ಮಾಡಬಹುದು ಆದರೆ ಗೋವನಲ್ಲ! ಈ ಮಾತು ಸರಿಯೇ?
ವೇದ ಕಾಲದ ಆರ್ಯರು ತಮ್ಮ ಹೋಮ ಕುಂಡಗಳಿಗೆ ಆಹುತಿ ಮಾಡಿದ ಗೋವುಗಳ ಸಂಖ್ಯೆಯ ವಿವರವಿದೆಯೇ? ಇವರುಗಳು ಹೊಟ್ಟೆ ಭರ್ತಿ ಉಂಡು ತೇಗಿದ್ದು ಇದೆ ಗೋ ಮಾಂಸವನ್ನು. ಅದೂ ವೇದಗಳ ಕಾಲದಲ್ಲಿ.ಇದು ನಾನು ಹೇಳಿದ್ದಲ್ಲ, ಪರಮಪೂಜ್ಯ ಸ್ವಾಮಿ ವಿವೇಕಾನಂದರೇ ಹೇಳಿದ್ದಾರೆ. ಆರ್ಯರ ಹೋಮಕುಂಡಗಳಿಗೆ ಅದೆಷ್ಟೋ ಗೋವುಗಳು ಬಲಿಯಾದದ್ದು ಈಗ ಇತಿಹಾಸ ಮಾತ್ರ. ನಿಮ್ಮ ಜಡ್ಡುಗಟ್ಟಿದ ಸಿದ್ದಾಂತಗಳನ್ನು ಬದಿಗಿರಿಸಿ ಗೋ ಹತ್ಯೆ ನಿಷೇಧದ ಬಗ್ಗೆ ನಿಮ್ಮ ಬೊಗಳೆ ಮಾತನ್ನು ನಿಲ್ಲಿಸಿ .
ಕೆ.ಪಿ. ಭಟ್
No comments:
Post a Comment