Wednesday, January 26, 2011

ಬೇನಾಮಿ ಮಾತು.....
ರೇಡಿಯೋದಲ್ಲಿ, 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂಬ ಹಾಡನ್ನು ಕೇಳುತ್ತಿರಬೇಕಾದರೆ ನನ್ನಲ್ಲಿ ಕನ್ನಡದ ಬಗ್ಗೆ ಮತ್ತಷ್ಟು ಪ್ರೀತಿಯನ್ನು ಹೆಚ್ಚಿಸುತ್ತಿತ್ತು. ಅದೇ ಸಂದರ್ಭ ಸಿ.ಎಂ. ಯಡಿಯೂರಪ್ಪ ನವರ ಆಚಾರವಿಲ್ಲದ ನೀಚ ನಾಲಿಗೆಯು ಬೇನಾಮಿ ಶಬ್ದಗಳನ್ನು ಕಕ್ಕುತ್ತಿತ್ತು.
ಬೆಂಗಳೂರು ಸುತ್ತ-ಮುತ್ತ ಬೇನಾಮಿ ಆಸ್ತಿ-ಪಾಸ್ತಿ ಪತ್ತೆ ಹಚ್ಚಿ ಮುಟ್ಟುಗೋಲು ಹಾಕಿಕೊಳ್ಳಬೇಕು. ಮತ್ತು ಇದರ ವಿವರ ನೀಡಿದವರಿಗೆ ಬಂಪರ್ ಬಹುಮಾನ ನೀಡಲಾಗುವುದೆಂದು ಖಾಸಗಿ ಹೋಟೆಲ್ ನ ಬಿ.ಜೆ.ಪಿ ಶಾಸಕಾಂಗ ಸಭೆಯಲ್ಲಿ ಹೇಳಿದ್ದರು. ಇಂತಹ ಹೇಳಿಕೆ  ಕೊಡಲು ಇವರಿಗೆ  ಯಾವ ನೈತಿಕತೆ ಇದೆ. 
ಕೊಚ್ಚೆಯಲ್ಲಿ ಬಿದ್ದಿರುವ ಯಡಿಯೂರಪ್ಪ ನವರಿಗೆ ಇನ್ನಾವುದೋ ಕೊಚ್ಚೆಯ ವಾಸನೆ ಬಡಿಯುತ್ತಿದೆ. ಕೆಸರಿಗೆ ಕಲ್ಲನ್ನು ಬಿಸಾಕಿದರೆ ಅದು ನಮಗೆ  ರಟ್ಟುತ್ತದೆ ಎನ್ನುವ ಪರಿಜ್ಞಾನ ಇವರಿಗಿಲ್ಲ.
ಒಟ್ಟಾರೆಯಾಗಿ ಬೇನಾಮಿ ಆಸ್ತಿಯನ್ನು ವಶಪಡಿಸಿಕೊಳ್ಳುವ ಮೂಲಕ ಸರ್ಕಾರದ ಬೊಕ್ಕಸವನ್ನು ಹೆಚ್ಚಿಸಿಕೊಳ್ಳುವ ಮಾರ್ಗವಿದು.
                                                           - ಕೆ.ಪಿ. ಭಟ್         

No comments:

Post a Comment