Monday, February 14, 2011

So called 'ತೀರಾ ಮುಕ್ತ'ರಾಗಬೇಡಿ 
ಇಂದಿನ ಯುಗದಲ್ಲಿ 'ನಾವೆಲ್ಲರೂ ಮುಕ್ತರು' ಎಂಬ ಹಣೆಪಟ್ಟಿಯ ಬದಲಾವಣೆ, ದೇಶದಲ್ಲಿ ಬಹಳ ತ್ವರಿತಗತಿಯಲ್ಲಿ ಆಗುತ್ತಿದೆ. ಎಲ್ಲರೂ ತಮ್ಮ  ಮನಬಯಕೆಯಂತೆ ಬಾಳುವುದೂ ಒಂದು Fashion ಆಗಿ ಬಿಟ್ಟಿದೆ. ಮನಸ್ಸಿಗೆ ಬಂದಂತೆ ಬದುಕುವುದು ಸರಿಯೋ ತಪ್ಪೋ ಅನ್ನುವ ವಿಮರ್ಶೆ ಇದಲ್ಲ. ಆದರೆ ಕೇವಲ ಶೋಕಿಗಾಗಿ ಅಂತೆಯೇ ಬಾಳುವುದು ಮಾತ್ರ ತಪ್ಪು. ಮತ್ತು ಅದೊಂದು ಶುದ್ಧ ಮೂರ್ಖತನ. ಯಾಕೆಂದರೆ, ಅದೂ ಒಂದು ರೀತಿಯ ಮುಖವಾಡವೇ ಸರಿ. 
ಇವತ್ತು ಪ್ರೇಮಿಗಳ ದಿನ. ಆ ಸೇನೆ ಈ ಸೇನೆ ಇವೆಲ್ಲದರ ಅಬ್ಬರವನ್ನೆಲ್ಲ ಮೀರಿ; ಅಲ್ಲಿ, ಇಲ್ಲಿ, ಎಲ್ಲೆಲ್ಲು  ಯುವ ಪ್ರೇಮಿಗಳು ತಮ್ಮ ಭಾವಾಂತರಂಗದ ಭೇಗುದಿ ಮತ್ತು ನವಿರಾದ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಇದು ನಿಜವಾಗಿಯೂ ತಪ್ಪು ಅಂತ ನಾನು ಹೇಳುವುದೇ ಇಲ್ಲ. ಸಮಷ್ಠಿ ವಿಕಾಸ ಇದರಿಂದ ನಿಜವಾಗಿಯೂ ಸಾಧ್ಯ. 'ಮುಕ್ತತೆಯೇ ಮಾನವನ ಸಮಷ್ಠಿ ವಿಕಾಸಕ್ಕೆ ನಾಂದಿ' . ಆದರೆ ತೀರಾ ಮುಕ್ತತೆ ಮಾತ್ರ ಸರಿ ಅಲ್ಲ. ಅದು ಮತ್ತೊಮ್ಮೆ ಮುಖವಾಡದಂತೆ ಗೋಚರಿಸುತ್ತದೆ. ಯಾಕೆಂದರೆ? , ಇವತ್ತಿನ ದಿನ ಅದೆಷ್ಟೋ ಪ್ರೇಮಿಗಳು ಪ್ರೇಮ ವಿವಾಹ ಆಗಿ ಮಕ್ಕಳಾಗುವಷ್ಟರ ಸಮಯಕ್ಕೆ ಸಂಬಂಧ ಮುರಿದುಕೊಂಡು ಬಿಡುತ್ತಾರೆ. ಮದುವೆಯ ಬಂಧನದ ಮುಂಚಿತವಾಗಿ ಹಲವು ಸ್ಯಾಂಪಲ್ ಮುಟ್ಟಿ ಅಭ್ಯಾಸ ಕೂಡಾ ಇವರಿಗೆ ಆಗಿರುತ್ತದೆ. ಇದಕ್ಕೆ ಕಾರಣವೇ 'ತೀರಾ ಮುಕ್ತತೆ'.

ಈ ಪರಿಸ್ಥಿತಿ ಮನಸ್ಸಿನ ಆಳದಲ್ಲಿ ಒಂದು ಅನಿರೀಕ್ಷಿತ ಅಸಂತ್ರಪ್ತಿಯನ್ನು  ಉಂಟುಮಾಡಿ ಅವರ ನೈತಿಕ ಬದುಕು ಹದಗೆಡುವಂತೆ ಮಾಡುತ್ತದೆ. ಇದೇ ಬೆಂಗಳೂರಿನಲ್ಲಿ ಒಂದು ದಿನಕ್ಕೆ ಸರಾಸರಿ 30 ಜೋಡಿ ಪ್ರತಿ ದಿನ ಕುಟುಂಬ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿದ್ದು, ಮದುವೆಯಿಂದ ಮುಕ್ತಿ ಪಡೆಯಲು ಮನವಿ ಸಲ್ಲಿಸುತ್ತಿದ್ದಾರೆ. ಒಟ್ಟಾರೆಯಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಒಟ್ಟು 17000 ಕುಟುಂಬಗಳು ವಿಚ್ಚೇದನಕ್ಕಾಗಿ  ಕೋರ್ಟ್ ಮೆಟ್ಟಿಲೇರಿದೆ. 
ಪ್ರೇಮಿಗಳು ಪ್ರೀತಿಸುವುದು, ಮುಕ್ತವಾಗಿ ಸಮಾಜದಲ್ಲಿ ತಲ್ಲೀನರಾಗುವುದು, ಪ್ರೇಮಿಗಳ ದಿನವನ್ನು ವಿಜ್ರಂಭಣೆಯಿಂದ ಆಚರಿಸುವುದು ತಪ್ಪು ಅಲ್ಲವೇ ಅಲ್ಲ; ಇದೆಲ್ಲವನ್ನು ಮಾಡುವುದಕ್ಕೆ ಬದುಕಿನ ಆಳದಲ್ಲಿ ಒಂದು ಬಲವಾದ ನೈತಿಕ ಕಾರಣವಿದ್ದರೆ ಮಾತ್ರ. ಬೇಕಾ ಬಿಟ್ಟಿ ಅವರು ಮಾಡಿದರು ಇವರು ಮಾಡಿದರು ಎಂದು ತೀಟೆಗಾಗಿಯೋ, ಇನ್ನೊಬ್ಬರ ಕಣ್ಣು ಕುಕ್ಕಿಸುವುದಕ್ಕಾಗಿಯೋ ಮಾಡಿದರೆ, So called ತೀರಾ ಮುಕ್ತರಾಗಿ ಬಾಳಿನಲ್ಲಿ ಅವನತಿ ಹೊಂದುವುದಂತು ಸತ್ಯ. 
ಇದೆಲ್ಲದರ ಹೊರತಾಗಿ, ಎಲ್ಲರಿಗೂ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು.
                                               -ಡಾ.ಶ್ರೇ  

No comments:

Post a Comment