Wednesday, February 23, 2011

ಭವಾಂತರ ಸಾಧಕರು 
ಅದೊಂದು ಅದ್ಬುತ ಲೋಕ, ಲೋಕ ಎಂದು ಅದನ್ನು ಹೇಳುವುದೇ ತಪ್ಪು. ಭವ ಮತ್ತು ಸ್ವರ್ಗದ ನಡುವಿನ Trance ಅದು ಎಂದು ಹೇಳುವುದೇ ಸೂಕ್ತ. ಭವದ ಎಲ್ಲಾ ಸೂಕ್ಷ್ಮತೆಗಳನ್ನು ಅರಿದು ಕುಡಿದು, ಮದ್ದು ಮಾಡಿ ಅದನ್ನು ಕಕ್ಕಿ, ಭವದ ಜನರೆಲ್ಲರೂ ಕಕ್ಕಾಬಿಕ್ಕಿಯಾಗುವಂತೆ ಮಾಡುವ ಭವ್ಯಾಂತರ ಲೋಕ. ಅತ್ತಕಡೆ, ಸ್ವರ್ಗದ  ಸ್ವರೂಪಗಳಲ್ಲಿ, ನೈಪುಣ್ಯತೆಗಳಲ್ಲಿ, ನಲಿದು ಕುಣಿದು ಅದನ್ನು ಸಾಧನೆಯಿಂದ ಆರಾಧಿಸಿ, ಸ್ವರ್ಗಾಂತರದ ಲೋಕದಲ್ಲಿ ಭವ್ಯವಾಗಿ ಬಾಳುತ್ತಾರೆ. ಯಾರಿವರು? ಇಷ್ಟು ಅತಿ ಸೂಕ್ಷ್ಮ ಭಾವನೆಯನ್ನು ಬರೆದಾಗಲಾದರೂ ಎಲ್ಲರಿಗೂ ಅರ್ಥವಾಗಬೇಕು. ಅರ್ಥವಾಗದಿದ್ದರೆ ಬಿಡಿ. ನಾನೇ ಹೇಳುತ್ತೇನೆ. ಇವರೇ ರುದ್ರನ ಆರಾಧಕರು, ಅರ್ಥಾತ್ ಶಿವನ ಮೂರನೇ ಮುಖವಾಗಿರುವ ರುದ್ರರು ಇವರು.  Yes ಇವರೇ ಅಘೋರಿಗಳು.
ಜೀವನದ  ಜಂಜಾಟದಿಂದ  ವಿಮುಖರಾಗಿ, ನಾಮ  ಬಳಿದು, ಶಿವನನ್ನು ಬದುಕೇ ಅಲ್ಲದ ಬದುಕಿನ ದೇವರನ್ನಾಗಿಸಿ ವಿಚಿತ್ರವಾಗಿ ಆರಾಧಿಸುತ್ತಾರೆ. ಅವರ ಆರಾಧನೆಯೇ ಒಂದು ವಿಸ್ಮಯ,ವಿಚಿತ್ರ, ನಿಗೂಢ, ಭಯಾನಕ. ಗಂಗೆಯಲ್ಲಿ ತೇಲಿ ಬಂದ ಹೆಣ ಭಕ್ಷಣಾ ವಿಧಿ , ಮಸಣದಲ್ಲಿ  ನಾಯಿಯನ್ನು ತಿನ್ನುವುದು, ಮಸಣದಲ್ಲಿ ಅರ್ಧ ಬೆಂದ ಹೆಣವನ್ನು ತಿನ್ನುವುದು, ಕೋಳಿಯನ್ನು ತಿನ್ನುವುದು, ಅವರ ಮೂತ್ರವನ್ನೇ ಕುಡಿಯುವುದು. ಸಾಧನಾ ಸುತ ಯೋಗದ ಮೂಲಕ ಆತ್ಮದ ಹಿಡಿತ, ಜತೆಗೆ ಇದೆಲ್ಲವನ್ನೂ ಮಾಡಲು ಬೇಕಾಗಿರುವ ರಾಗವನ್ನು ಮನದಲ್ಲಿ ಉದಿಸಲು ಸಹಾಯಕವಾಗುವ  ಆಯುರ್ ಪುತ್ರ ಗಾಂಜಾದ ಸೇವನೆ. 
ಇವರು ಮನುಜನಿಂದ ದೂರವಿದ್ದು ಗಂಗೆಯಲ್ಲಿಯೋ ಕಾಶಿಯಲ್ಲಿಯೋ, ಮತ್ತೆ ಹಲವು ಅಜ್ಞಾತ ಸ್ಥಳಗಳಲ್ಲಿ ಅವಿತು ಕುಳಿತುಕೊಂಡು ಸಾಧನೆ ಮಾಡುತ್ತಿರುತ್ತಾರೆ. ಪರಮಾತ್ಮನನ್ನು ಸೇರಲು. ಭವದ ಎಲ್ಲಾ ಸಂಭಂಧಗಳನ್ನು ಕಡಿದು ಜ್ಞಾನ ಸಾಗರವನ್ನು ತಲುಪಿ, ಸ್ವರ್ಗಾವಸ್ಥೆಯ ಅವಸ್ಥೆಯಲ್ಲಿ ಮುಕ್ತಿ ಸಂಕೇತವಾಗಲು ಯೋಗ ನಿರತರಾಗಿರುತ್ತಾರೆ. 
ಭವಕ್ಕೆ ಎಲ್ಲಾ ಸಂದೇಶವನ್ನು ಸಾರುವ ಹಾಗು ಯಾವ ಸಂದೇಶವನ್ನೂ ಸಾರದೆ ಇರುವ ಅವಸ್ಥೆಯಲ್ಲಿ ಜನರಿಗೆ ಅರ್ಥವಾಗುವ ಇವರ ಬದುಕನ್ನು ಅಧ್ಯಯನ ಮಾಡುವುದೇ ಮತ್ತೊಂದು ಸಾಧನೆ. ಅಂದರೆ ಎಲ್ಲರೂ ಇದೆ ಬದುಕನ್ನು ಬದುಕಬೇಕು ಎಂದು ಹೇಳುವುದಲ್ಲ, ಆದರೆ ಅವರ ಬದುಕನ್ನು ಅವಹೇಳನವಂತೂ ಮಾಡುವುದು ಶುದ್ಧ ತಪ್ಪು. ಒಮ್ಮೊಮ್ಮೆ ಆಗಾಗ ಬದುಕಲ್ಲಿ ತೀರಾ ನಿರಾಶರಾದಾಗ, 'ಅವರ ಹಾಗೆ ಆದರೆ' ಎಂದು ಅನಿಸುವುದಂತೂ  ಸತ್ಯ 
                                           -ಡಾ.ಶ್ರೇ 

No comments:

Post a Comment