Thursday, February 24, 2011

ಮತ್ತೆ ಅಂತೆಯೇ ಆಗದಿರಲಿ 
ಈ ಬಾರಿ ಯಡಿಯೂರಪ್ಪನವರು ತಮ್ಮ ಸೋಲುಗಳು ಮತ್ತು ಸೋಲಿನಿಂದ ಹೊರಬರುವ ಯೋಜನೆಯನ್ನು ಮನನ ಮಾಡಿ ಬಜೆಟ್ ಮಂಡನೆ ಮಾಡಲಿದ್ದಾರೆ. ಒಂದು ವೇಳೆ ಮಧ್ಯಂತರ ಚುನಾವಣೆ ಎದುರಾದರೆ, ಅದಕ್ಕೂ ಪೂರಕವಾಗುವಂತೆ ಬಜೆಟ್ ಅನ್ನು ತಯಾರಿಸಿ ಜನರ ಮನವೊಲಿಸಲಿದ್ದಾರೆ ಎನ್ನಬಹುದು.
ಕೃಷಿಕರಿಗೆ ಶೇ 1ರ ಬಡ್ಡಿ ದರದಲ್ಲಿ ಬೆಳೆ ಸಾಲ, ಒಣಭೂಮಿ ಅಭಿವ್ರದ್ದಿ  ಯೋಜನೆ, ಭತ್ತ-ಕಬ್ಬು ನಾಟಿ ಮತ್ತು ಕಟಾವು ಯಂತ್ರಗಳಿಗೆ ಸಬ್ಸೀಡಿ, ಬಸವೇಶ್ವರ ವಿ.ವಿ ಸ್ಥಾಪನೆ, ಶಾಸಕರ ನಿಧಿ 2 ಕೋಟಿ ರೂ ಗೆ  ಹೆಚ್ಚಳ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕೃತಿಗಳು ಕಡಿಮೆ ಬೆಲೆಗೆ ಮಾರಾಟ, ವಾಜಪೇಯಿ ಆರೋಗ್ಯಶ್ರೀ ಯೋಜನೆ ಮೈಸೂರು ವಿಭಾಗಕ್ಕೆ ವಿಸ್ತರಣೆ, ಅಕ್ಕಿ-ಬೇಳೆ ಕಾಳು ಮೇಲಿನ ತೆರಿಗೆ ಕಡಿತ. ಇವು ಮುಂಗಡ ಪತ್ರದಲ್ಲಿ ಪ್ರಕಟಣೆ ಹೊರಬೀಳುವ ನಿರೀಕ್ಷೆಯಲ್ಲಿರುವ ಪ್ರಮುಖ ಯೋಜನೆಗಳು.
ಈ ಯೋಜನೆಗಳು ಇದೇ ರೀತಿ ಪ್ರಕಟಗೊಂಡು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬಂದರೆ, ಇದರಿಂದ ಯಾರಿಗೆ ಲಾಭವಾಗುತ್ತದೆಯೋ, ನಷ್ಟವಾಗುತ್ತದೆಯೋ ಎಂಬ ಚರ್ಚೆಯೇ ಬೇಡ. ಯಾಕೆಂದರೆ?  ಇದು ಸಂಪೂರ್ಣ ಜನ ಪರ ಬಜೆಟ್. ಮೇಲೆ ಹೇಳಿರುವ ಎಲ್ಲಾ ಯೋಜನೆಗಳಿಂದ ಜನರಿಗೆ ಅತ್ಯಂತ ಲಾಭವಿದೆ. ಆದರೆ ಪ್ರಶ್ನೆ ಇರುವುದು , ಈ ಎಲ್ಲಾ ಯೋಜನೆಗಳು ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ಬರುತ್ತದೆಯೋ ಇಲ್ಲವೋ ಎಂದು.ಏಕೆಂದರೆ, ಕಳೆದ ಬಾರಿ ಬಜೆಟ್ ನಲ್ಲಿ ಪ್ರಕಟಗೊಂಡ 'ಕೆಲವು' ಯೋಜನೆಗಳು ನೆನೆಗುದಿಗೆ ಬಿದ್ದಿದೆ. ಇನ್ನೂ ಕೆಲವು ಯೋಜನೆಗಳು ಜಾರಿಗೆ ಬರಲಿಲ್ಲ. ಬರೀ ಆರಂಭಶೂರತನಕ್ಕೆ  ಮತ್ತು ಮತಗಳಿಕೆಗೆ ಮಾಡುವ ಗಿಮಿಕ್ನಂತೆ ಆವತ್ತಿನ ಬಜೆಟ್ ಆಗಿದೆ ಎಂದರೂ ತಪ್ಪಲ್ಲ. ಈ ಬಾರಿಯೂ ಹಾಗೇ ಆಗದಿರಲಿ ಎಂದು ನಾವು ಆಶಿಸೋಣ. 
ನಾವು ಯಾವತ್ತೂ ಆಶಾವಾದಿಗಳಾಗಿರಬೇಕು. ಆದರೆ ರಾಜ್ಯದ ತಲೆಯ ಮೇಲಿರುವ ಸಾಲಕ್ಕಿಂತ ಅಧಿಕ ಮೊತ್ತದ ಬಜೆಟ್ ಮಂಡಿಸುತ್ತೇವೆ ಎಂದು ಬೊಂಬಡ ಬಡೆದರೆ ಯಾರಿಗೆ ನಗು ಬರಲ್ಲ ಹೇಳಿ ? ಇದರಿಂದ ಜನ ಯಾವತ್ತಿನಂತೆ ನಿರಾಶಾವಾದಿಗಳಾಗುತ್ತಾರೆ. ನಾವೇ ಮಾಡಿದ ತಪ್ಪಿಗೆ ನಾವೇ ಶಿಕ್ಷೆ ಅನುಭವಿಸ ಬೇಕು ಬಿಡಿ.
                                  -ಡಾ.ಶ್ರೇ 

No comments:

Post a Comment