Tuesday, February 22, 2011

ಪ್ಲಾನಿಂಗ್ ಅಗತ್ಯ 
ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು, ಎಷ್ಟು ಬೊಬ್ಬೆ ಹೊಡೆದು, ತಾವು ಕರ್ನಾಟಕವನ್ನು ಪ್ರಕಾಶಿಸುತ್ತೇವೆ ಎಂದರೂ ಇನ್ನೂ 3 ರಿಂದ 4 ವರ್ಷಗಳ ಕಾಲ ರಾಜ್ಯ ಬಹಳಷ್ಟರಮಟ್ಟಿಗೆ ವಿದ್ಯುತ್ ಕೊರತೆಯನ್ನು ಎದುರಿಸಲಿದೆ. ಸಚಿವೆ ಕರಂದ್ಲಾಜೆ ಏನೂ ಕೆಲಸ ಮಾಡದೆ ಸುಮ್ಮನೆ ಕುರ್ಚಿಯಲ್ಲಿ ಕೂತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅವರು ಸರಿಯಾದ ರೀತಿಯ ಪ್ಲಾನಿಂಗ್ ಇಲ್ಲದೆ ಯೋಜನೆಯನ್ನು ಹೊರಡಿಸಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎನ್ನಬಹುದು.
ಯಾವೊದೋ ವಿರೋಧ ಪಕ್ಷ, ವೋಟ್ ಬ್ಯಾಂಕ್ ಇನ್ನಿತರ ಒತ್ತಡಗಳಿಂದ ಮಣಿದು ಕರಂದ್ಲಾಜೆಯವರು, ಶಾಕಿನಿಂದ ಹೊರಬರಲು ತ್ವರಿತ ಯೋಜನೆಗಳನ್ನು ಹೊರಡಿಸಿರುವುದೇ ಇದಕ್ಕೆ ಮೂಲ ಕಾರಣ. ಒಬ್ಬ ವ್ಯಕ್ತಿ ಯಾವತ್ತೂ ಸಮಯವನ್ನು ಚೇಸ್ ಮಾಡಿ ಆಲೋಚನೆ ಮಾಡಿ ಗೆಲ್ಲುತ್ತೇನೆ ಎಂದು ಹೋದರೆ ಗೆಲುವು ಸಾಧ್ಯವಿಲ್ಲ. ಒಂದು ವೇಳೆ ಗೆಲುವು ದೊರೆತರೂ ಆ ಗೆಲುವು ಸ್ವಲ್ಪ ದಿನದ ಮಟ್ಟಿಗೆ ಮಾತ್ರ ಸೀಮಿತವಾಗಿರುತ್ತದೆ. ಶೋಭಾ ಅವರ ಸ್ಥಿತಿಯೂ ಹೀಗೆ ಆಗಿದೆ. ಮೊನ್ನೆ ಮೊನ್ನೆ ಅವರು ಹೊಸ ಮನೆಗಳಿಗೆ ಸೋಲಾರ್ ಕಡ್ಡಾಯ ಎಂಬ ಯೋಜನೆಯನ್ನು ಹೊರಡಿಸಿ ಮಾಧ್ಯಮ ಮಿತ್ರರಿಂದ ಹಾಗು ಜನಗಳಿಂದ ಹೊಗಳಿಕೆ ಪಡೆದುಕೊಂಡರು. ಆದರೆ ವಾಸ್ತವದಲ್ಲಿ ಆ ಯೋಜನೆ ನೆನೆಗುದಿಗೆ ಬಿದ್ದಿದೆ. It is just because of failure in proper planning.
ರಾಜ್ಯದಲ್ಲಿ ಇವತ್ತು 165 ದಶಲಕ್ಷ ಯುನಿಟ್ ಅಷ್ಟರಮಟ್ಟಿಗೆ ವಿದ್ಯುತ್ ಬೇಡಿಕೆ ಇದೆ. ಒಟ್ಟು ರಾಜ್ಯ ಈಗ 8 ರಿಂದ 10 ದಶ ಲಕ್ಷ ಯುನಿಟ್ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಆದರೆ 2010-11  ರ ಬಜೆಟ್ ನಲ್ಲಿ ಇಂಧನಕ್ಕೆ ಮೀಸಲಿರಿಸಿದ ಹಣ ಕೇವಲ 3547 ಕೋಟಿ. ವಿಶ್ಲೇಷಣಾತ್ಮಕವಾಗಿ ಹೇಳುವುದಾದರೆ ಈ ಹಣ ಎಲ್ಲಿಗೂ ಸಾಲುವುದಿಲ್ಲ. ಏಕೆಂದರೆ, ಇದರ ಅರ್ಧದಷ್ಟು ಹಣವನ್ನು ರಾಜ್ಯ ಕಳೆದ 10 ತಿಂಗಳಿನಿಂದ ವಿದ್ಯುತ್ ಖರೀದಿಗೆಂದೇ ವ್ಯಯಿಸಿದೆ. ಹಣ ಮುಡಿಪು ಇಡಬೇಕು ಎಂಬ ಕೇವಲ ಕಾರಣಕ್ಕೆ ಮಾತ್ರ ಹಣವನ್ನು ಮೀಸಲಿಟ್ಟಿದ್ದಾರೆ ಎಂದೆನಿಸುತ್ತದೆ. ರಾಜ್ಯದಲ್ಲಿ ಸಾಕಷ್ಟು ವಿದ್ಯುತ್ ಘಟಕ ಸ್ಥಾಪನೆಯ ಯೋಜನೆಗೆ ಹಸಿರು ನಿಶಾನೆ ದೊರೆತಿದ್ದರೂ, ಅಲ್ಲಿನ ಕಾಮಗಾರಿಯೂ ಬಹಳ ವಿಳಂಬವಾಗುತ್ತಿದೆ. ಮತ್ತೆ ಬೇಜಾವಾಬ್ಧಾರಿ.
ಒಟ್ಟಾರೆಯಾಗಿ, ಇಂಧನ ಸಚಿವರು ಇವೆಲ್ಲವನ್ನು ಕೂಲಂಕುಷವಾಗಿ ಗಮನಿಸಿ, ಕುಳಿತು ಸರಿಯಾದ ಪೂರ್ವತಯಾರಿ ಮಾಡಿ, ಅದಕ್ಕೆ  ತಕ್ಕ ಹಣ ವ್ಯಯಿಸಿ ಪ್ರಾಮಾಣಿಕವಾಗಿ ಮುಂದುವರೆದರೆ ಸಮಸ್ಯೆ ಬಗೆಹರಿದೀತು ಎಂಬುವುದು ನಮ್ಮ ಭಾವನೆ. ಆದರೆ ಇದೆ ರೀತಿ ಮುಂದುವರೆದರೆ, ಸಮಸ್ಯೆ ಉಲ್ಬಣಿಸುತ್ತದೆ ಹೊರತು ಕಡಿಮೆಯಾಗುವುದು ಸಾಧ್ಯವಿಲ್ಲ.
                                           -ಡಾ.ಶ್ರೇ 

No comments:

Post a Comment