Tuesday, February 22, 2011

ಮಸ್ತಕದಲ್ಲಿ ಪುಸ್ತಕದ ರಾಶಿ ಬಂದಾಗ
ಬರದದ್ದೆಲ್ಲ  ಬರಹವಾಗುವುದಿಲ್ಲ, ಭಾಷೆ ಒಲಿದು ಪದಗಳು ನಾವು ಹೇಳಿದಂತೆ ಕೇಳುತ್ತಿರಬೇಕು. ಬರಹದಲ್ಲಿ ಸೂಕ್ಷ್ಮತೆಯೊಂದಿಗೆ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಗೀಜಗನ ಗೂಡಿನಂತೆ ಸುಂದರವಾಗಿ ಮತ್ತು ಮನಸ್ಸಿನಲ್ಲಿ ನೆಲೆಯೂರುವ ರೀತಿಯಲ್ಲಿ ಮೂಡಿ ಬರಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ  ಬರಹವೇ ಮೂಲವಾಗಿರುವುದರಿಂದ ಬರವಣಿಗೆಯು ಓದುಗನಿಗೆ knowledge  ಕೊಡುವ ರೀತಿಯಲ್ಲಿ ಬರಬೇಕು ಎನ್ನುವುದು ನನ್ನ ಅಭಿಪ್ರಾಯ. 
ಅಮೇರಿಕಾದ ಜೇಮ್ಸ್ ಹ್ಯಾಡ್ಲಿ ಚೇಸ್ ಒಬ್ಬ ಉತ್ತಮ ಕಾದಂಬರಿಗಾರ. ಇವರು 63 ಸ್ವನಾಮಾಕಿಂತ  ಕಾದಂಬರಿಗಳನ್ನು ಹಾಗು ಸ್ವನಾಮಾಕಿಂತ ವಲ್ಲದೆ ಬೇರೆ ಹೆಸರಿನಲ್ಲಿ 18 ಕಾದಂಬರಿಗಳನ್ನು ಬರೆದಿದ್ದಾರೆ. ಜೊತೆಗೆ ನಾಟಕವನ್ನು ರಚಿಸಿದ್ದಾರೆ. ಇವರ ಕಥೆಗಳನ್ನು ನಾವು ಓದಲು ಶುರು ಹಚ್ಚಿದರೆ ನಾವು ನಮ್ಮ ಓದಿನ ವೇಗವನ್ನು ಹಿಡಿಯಲು ಸಾಧ್ಯವಿಲ್ಲ. ಇವರ ಕಥೆಗಳು ಸರಳತೆಯೊಂದಿಗೆ ಸಾಮಾನ್ಯ ಜೀವನದ ಅದ್ಭುತ ರೋಚಕಗಳನ್ನು ಹೊಂದಿರುವ ಇವರ ಬರವಣಿಗೆಯು ಶ್ರೇಷ್ಠತೆಯನ್ನು  ಪಡೆದಿವೆ. 
ನಾನು ಈ ಕುತೂಹಲಕ್ಕಾಗಿ ಚೇಸ್ ರವರ ಒಂದೆರಡು ಪುಸ್ತಕಗಳನ್ನು ಸುಮ್ಮನೆ ತಿರುವು ಹಾಕಿ ಬರವಣಿಗೆಯ ಶೈಲಿಯನ್ನು ಗಮನಿಸಿ ರುಚಿಯನ್ನು ಹಿಡಿಯುವ ಪ್ರಯತ್ನದಲ್ಲಿದ್ದೇನೆ. ಅವರ ಬರವಣಿಗೆಯು ಹೆಚ್ಚಿನ ಮಟ್ಟಿಗೆ ನನ್ನನ್ನು ಆಕರ್ಷಿಸಿದೆ. ವ್ಯಾಪಾರಿಗಳಿಗೆ ಪುಸ್ತಕ ಪೂರೈಸುವ ಕೆಲಸ ನಿರ್ವಹಿಸುತ್ತಿದ್ದ ಇವರು ಪುಸ್ತಕ ರಾಶಿಯ ಮೇಲೆ ಇದ್ದುದ್ದರಿಂದ ಓದುವ ಗೀಳಿನೊಂದಿಗೆ ಬರವಣಿಗೆಯಲ್ಲಿ ಯಶಸ್ಸು ಕಂಡರೂ ಎನ್ನಬಹುದು. 
ಒಂದಿಷ್ಟು ಗೊಂದಲಗಳು, ಮನಸ್ಸಲ್ಲಿ ಮೂಡುವ ಹೊಸ ರೀತಿಯ ಸಂಘರ್ಷಗಳೊಂದಿಗೆ ಓದುವಿಕೆ ಎಂಬ ಹುಚ್ಚನ್ನು ಹಿಡಿಸಿಕೊಂಡು, ಬರವಣಿಗೆಯಲ್ಲಿ ತೊಡಗಿದಾಗ ಜನರ ಮನದಲ್ಲಿ ನೆಲೆಯೂರಲು ಸಾಧ್ಯ. 
                                                               -ಕೆ.ಪಿ.ಭಟ್ 

No comments:

Post a Comment