Saturday, February 12, 2011

ಅಫ್ಜಲ್ ಗೆ ಕಾಶ್ಮೀರ ಜೈಲೇ ಬೇಕಂತೆ!
ಸಂಸತ್ ಭವನದ ಮೇಲಿನ ದಾಳಿಯ ಆರೋಪಿ ಅಫ್ಜಲ್ ಗುರು, ತನ್ನನ್ನು ತಿಹಾರ್ ಜೈಲಿನಿಂದ ಕಾಶ್ಮೀರದ ಜೈಲಿಗೆ ವರ್ಗಾಹಿಸಬೇಕೆಂದು ಕೇಳಿಕೊಂಡಿದ್ದಾನೆ. 'ತಾನು ತಿಹಾರ್ ಜೈಲಿನಲ್ಲಿ ಇರುವುದರಿಂದ, ನನ್ನ ತಾಯಿಗೆ, ಕುಟುಂಬದ ಸದಸ್ಯರಿಗೆ ನನ್ನನ್ನು ಭೇಟಿಯಾಗಲು ಕಷ್ಟವಾಗುತ್ತದೆ' ಎಂಬ ಕಾರಣ ನೀಡಿದ್ದಾನೆ. 
ಈ ಅಫ್ಜಲ್ ಸಾಮಾನ್ಯದವನಲ್ಲ, ಈತ 2001 ರಲ್ಲಿ ಸಂಸತ್ ಭವನದ ಮೇಲೆ ಮಾಡಿದ ದಾಳಿಯ ಪ್ರಮುಖ ಆರೋಪಿ. ಇವನು ಮಾಡಿದ ಈ ಕೆಲಸದಿಂದಾಗಿ ಅಂದು 7 ಜನ ಪೊಲೀಸರು, ತಮ್ಮ ಪ್ರಾಣವನ್ನು  ಅರ್ಪಿಸಿ ದೇಶದ ಮಾನ ಕಾಪಾಡಿದ್ದರು. ಅಫ್ಜಲ್ ಗುರುವಿಗೆ ಸುಪ್ರೀಂ ಕೋರ್ಟ್ 2004 ರಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ಕೆಲ ಮಾನವ ಹಕ್ಕು ಹೋರಾಟಗಾರರ 'ಶ್ರಮ'ದಿಂದಾಗಿ ಈತ ಇನ್ನು ಉಳಿದುಕೊಂಡಿದ್ದಾನೆ.
ಅಫ್ಜಲ್ ಗುರು ತನ್ನನ್ನು ಕಾಶ್ಮೀರ ಜೈಲಿಗೆ ವರ್ಗಾಹಿಸಬೇಕೆಂದು, ಹೊಸ ರಾಗವನ್ನು ತೆಗೆಯುತ್ತಿದ್ದಾನೆ. ಖಂಡಿತವಾಗಿಯೂ ಅದರಲ್ಲಿ ಒಳ್ಳೆ ಉದ್ದೇಶ ಇರಲಿಕ್ಕಿಲ್ಲ. ಅಮಾಯಕರ ಪ್ರಾಣವನ್ನು ತೆಗೆಯುವ ಈತನಿಗೆ ತನ್ನ ಕುಟುಂಬದ ಮೇಲೆ ಕಾಳಜಿಯಂತೆ!
ಎಂತೂ ಕಾಶ್ಮೀರದ ಪರಿಸ್ಥಿತಿ ಚೆನ್ನಾಗಿಲ್ಲ, ಅದರ ಲಾಭವನ್ನು ಪಡೆದುಕೊಂಡು ಪಾಕಿಸ್ತಾನಕ್ಕೆ ತಪ್ಪಿಸಿಕೊಂಡು ಓಡಿ ಹೋಗುವ ಯೋಜನೆ ಇರಬಹುದು. 
ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರಕಾರ ಈ ಕುರಿತಾಗಿ ಸರಿಯಾಗಿ ಯೋಚಿಸಬೇಕಾದ ಅಗತ್ಯವಿದೆ. ಅಫ್ಜಲ್ ಅನ್ನು ಇಷ್ಟು ಸಮಯ ಬದುಕ ಬಿಟ್ಟದ್ದೇ ನಮ್ಮ ತಪ್ಪು ಇನ್ನು ಆತ ಕೇಳುವ ಸೌಲಭ್ಯಗಳನ್ನು ಒದಗಿಸುವುದು ಅದಕ್ಕಿಂತ ದೊಡ್ಡ ತಪ್ಪಲ್ಲವೇ? ಏನಂತೀರಿ? 
                                                                                     -ಡಾ.ಶೆಟ್ಟಿ 

No comments:

Post a Comment