Saturday, February 5, 2011

ಮೂರ್ತಿಗೆ ಕೀರುತಿ?
ಸಾಧನೆ ಬೇರೆ, ವೈಯುಕ್ತಿಕ ವಿಚಾರ ಬೇರೆ. ವ್ಯಕ್ತಿಯ ವೈಯುಕ್ತಿಕ ಸಿದ್ಧಾಂತಗಳು ಏನೇ ಆಗಿರಲಿ, ಆದರೆ ಆ ವ್ಯಕ್ತಿ ಮಹಾನ್ ಸಾಧನೆ ಮಾಡಿದರೆ, ಗೌರವಿಸುವುದು ನಮ್ಮ ನೈತಿಕ ಕರ್ತವ್ಯ. ವೈಯುಕ್ತಿಕ ನೆಲೆಯಲ್ಲಿ ನಮಗೆ ಆ ವ್ಯಕ್ತಿ  ಇಷ್ಟವಾಗದಿದ್ದರೆ, ನಿಮ್ಮ ವೈಯುಕ್ತಿಕ ಸಿದ್ಧಾಂತಕ್ಕೆ ಅವರದ್ದು ಸರಿ ಹೊಂದುವುದಿಲ್ಲ ಎಂದು ಸುಮ್ಮನೆ ಕೂರುವುದು ಉತ್ತಮ ವ್ಯಕ್ತಿತ್ವಕ್ಕೆ ಉದಾಹರಣೆ.
ಚಿದಾನಂದ ಮೂರ್ತಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದವರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಅವರು ನೀಡಿದ್ದಾರೆ.ತುಸು ರೈಟ್ ಪರ ಎಂಬ ಕಾರಣಕ್ಕೆ ನಾವು ಅವರ ಈ ವಿಚಾರವನ್ನು ಸಾಧನೆಯ ವಿಚಾರಕ್ಕೆ ಇಟ್ಟು ತುಲನೆ ಮಾಡಬಾರದು.ಆದರೆ ಗೌರವ ಡಾಕ್ಟರೇಟ್ ಕೊಡುವ ವಿಚಾರದಲ್ಲಿ ಮೂರ್ತಿಯವರಿಗೆ ಅನ್ಯಾಯವಾಗಿದೆ. ಇವರು 1960 ರ ಕಾಲದಲ್ಲಿ ಛಂದಸ್ಸು, ಪ್ರಾಚೀನ ಕಾವ್ಯ, ಶಾಸನದ ವಿಷಯಗಳಲ್ಲಿ ಸಂಪೂರ್ಣ ಸಂಶೋಧನೆ ಗೈದಿದ್ದಾರೆ. ಇವರ ಕನ್ನಡ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ ಒಂದು Monument work.   ಭಾಷಾ ವಿಜ್ಞಾನಕ್ಕೆ ಇವರ ಕೊಡುಗೆ ಹಲವಾರು.  ಇವರ ಲೇಖನಗಳ ಸಂಗ್ರಹ, 8-10 ಸಂಪುಟಗಳ ಸೀರೀಸ್ ಆಗಿ ಪ್ರಕಟಗೊಂಡಿದೆ. ಪ್ರತಿ ಸಂಪುಟ 600 -700 ಪುಟಗಳನ್ನು ಹೊಂದಿದೆ. ಇಲ್ಲೇ ನಮಗೆ ಮನವರಿಕೆ ಆಗಬೇಕು;ಅವರ ಸಾಧನೆ ಏನು ಎಂಬುವುದು. 
ಆದರೆ ವೈಯುಕ್ತಿಕ ಸಿದ್ದಾಂತಕ್ಕೆ ಇದನ್ನು ತುಲನೆ ಮಾಡಿ, ಗೌರವ ಡಾಕ್ಟರೇಟ್ ಆಯ್ಕೆಯಲ್ಲಿ ಹೊಲಸು ರಾಜಕೀಯವನ್ನು ಕೆಲವು ಘನ ಸಂಬಂಧಿ ವ್ಯಕ್ತಿಗಳು ಮಾಡಿರುವುದು, ಸಾಮಾಜಿಕ ಸಾರ್ಥಕತೆಯ ಸೋಲು ಎಂದು ವ್ಯಾಖ್ಯಾನಿಸ ಬಹುದು.
                        -ಡಾ.ಶ್ರೇ 

No comments:

Post a Comment