Monday, February 21, 2011

ಜೆ.ಡಿ.ಎಸ್- ಬಿಜೆಪಿ ಮತ್ತೆ ಮೈತ್ರಿಯಂತೆ!
'ಪರಿಸ್ಥಿತಿ ಬಂದರೆ ನಾವು ಜೆ.ಡಿ.ಎಸ್ ಜೊತೆ ಮತ್ತೆ ಕೈ ಜೋಡಿಸಲು ಸಿದ್ಧ' ಎಂಬ ಮಾತುಗಳನ್ನು ಬಿ.ಜೆ.ಪಿ ರಾಜ್ಯಾಧ್ಯಕ್ಷ ಈಶ್ವರಪ್ಪನವರು ಹೇಳಿದ್ದಾರೆ. ಈ ಮೂಲಕ ರಾಜ್ಯದ ಎಲ್ಲಾ ಪಕ್ಷಗಳು ಅವಕಾಶವಾದಿ ರಾಜಕಾರಣ ಮಾಡುವುದರಲ್ಲಿ ಎತ್ತಿದ ಕೈ. ಎಂಬ ಅಂಶ ಸ್ಪಷ್ಟವಾಗುತ್ತದೆ. 
ಹಿಂದೊಮ್ಮೆ ಜೆ.ಡಿ.ಎಸ್ ಜೊತೆ ಹನಿಮೂನ್ ಮಾಡಿ ನಂತರ ಡೈವೋರ್ಸ್ ಆಗಿದ್ದ ಬಿ.ಜೆ.ಪಿ ನಂತರ ಅದೇ ವಿಚಾರವನ್ನು ಮತದಾರರ ಮುಂದೆ ಇಟ್ಟು ಅಧಿಕಾರಕ್ಕೆ ಬಂದಿತ್ತು. ಯಡಿಯೂರಪ್ಪನವರಂತು ' ನಮಗೆ ನಂಬಿಕೆ ದ್ರೋಹವಾಗಿದೆ' ಎಂದೇ ಮಾಧ್ಯಮಗಳ ಎದುರು ಕಣ್ಣೀರಿಟ್ಟಿದ್ದರು. ಅವರ ಕಣ್ಣೀರು ಕಂಡವರಿಗೆ ಗಂಡ ಕೈ ಕೊಟ್ಟ ಹೆಂಡತಿಯಂತೆ ಕಾಣುತ್ತಿತ್ತು. 
ನಮ್ಮ ಮತದಾರರು ಕರುಣೆ ತೋರಿ ಬಿ.ಜೆ.ಪಿ ಯನ್ನು ಅಧಿಕಾರಕ್ಕೆ ಏರಿಸಿದ್ದರು. ಆದರೆ ಈಶ್ವರಪ್ಪನವರು ಪುನಃ ಜೆ.ಡಿ.ಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮಾತನಾಡುತ್ತಿದ್ದಾರೆ. ಇದು ನಿಜಕ್ಕೂ ನಾಚಿಕೆಗೇಡು! 
ಇನ್ನು ಮುಂದೆ ಸರಕಾರಕ್ಕೆ ಆಪತ್ತಿನ ಪರಿಸ್ಥಿತಿ ಬಂದರೆ ಜೆ.ಡಿ.ಎಸ್ ಜೊತೆ ಕೈ ಜೋಡಿಸುವ ಸಾಧ್ಯತೆ ಇದೆ ಎಂಬ ವಿಚಾರ ಜನರಿಗೆ ಮನದಟ್ಟಾಗಿರುವುದು ಯಾವಾಗ ಎಂದರೆ; ಬಿ.ಜೆ.ಪಿ ಮೈಸೂರು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಜೆ.ಡಿ.ಎಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಾಗ. 
ಅಧಿಕಾರ ಬೇಕೆಂದರೆ ಹೊಲಸು ತಿನ್ನಲೂ ರೆಡಿ ಇರುವ ನೀಚ ರಾಜಕಾರಣಿಗಳಿಂದಲೇ ರಾಜಕಾರಣ ಇಂತಹ ದುಸ್ಥಿತಿಗೆ ಇಳಿದಿರುವುದು. ಈಶ್ವರಪ್ಪ ಅವರ ಮಾತಿನಿಂದ ರಾಜಕಾರಣದಲ್ಲಿ ಯಾರು ಯಾರಿಗೂ ಶತ್ರುಗಳಲ್ಲ, ಮಿತ್ರರೂ ಅಲ್ಲ ಎಂಬ ವಿಚಾರ ಸ್ಪಷ್ಟವಾಗುತ್ತದೆ. ಈಶ್ವರಪ್ಪನವರ ಈ ಮಾತು ಪಕ್ಷದಲ್ಲಿ ಇನ್ನೂ ಉಳಿದಿರುವ ಅತೃಪ್ತರಿಗೆ ಎಚ್ಚರಿಕೆಯ ಸಂದೇಶವೂ ಆಗಿರಬಹುದು. ಸಂಪುಟ ಪುನರ್ ರಚನೆ ಮಾಡುವಾಗ ಕಿರಿಕ್ ಮಾಡುವ ಶಾಸಕರೇ ಎಚ್ಚರವಾಗಿರಿ! ಬಿ.ಜೆ.ಪಿ ಗೆ ನಿಮ್ಮ ಅಗತ್ಯವಿಲ್ಲ ಎಂತೂ ಜೆ.ಡಿ.ಎಸ್ ಶಾಸಕರು ಮಾಡಲು ಕೆಲಸವಿಲ್ಲದೆ ಬಿದ್ದಿದ್ದಾರೆ.
ಹಾಗೇ ಸುಮ್ಮನೆ- ಜೆ.ಡಿ.ಎಸ್ ನೊಂದಿಗೆ ಪುನಃ ಮೈತ್ರಿ ಮಾಡುತ್ತೇವೆ ಎಂಬ ಮಾತು ಕೇಳಿದ ಉಮೇಶ, 'ನಮ್ಮ ಕಮಲ ಪಕ್ಷದವರು ಅಧಿಕಾರಕ್ಕೆ ಬೇಕಾಗಿ ನಕ್ಸಲರ ಜತೆ ಕೂಡ ಮೈತ್ರಿ ಮಾಡಿಕೊಳ್ಳಬಹುದು' ಎಂದು ಹೇಳುತ್ತಿದ್ದಾನೆ.
                                               -ಡಾ.ಶೆಟ್ಟಿ 
   

No comments:

Post a Comment