ಗೆಲ್ಲಲಿ ಭಾರತ
ಅಭೂತಪೂರ್ವ ಆಶಾವಾದ, ಸಹಸ್ರ ಹಾರೈಕೆ, ನೂರಾರು ಕನಸು ಮತ್ತೆ ಜಯದ ಮನಸ್ಸು. ಇವೆಲ್ಲಕ್ಕೆ ಪೂರಕ ಎಂಬಂತೆ, ಸಾರ್ವತ್ರಿಕ ಸಮತೋಲನ, ಸಂಘಟಿತ, ಸಂಘರ್ಷ ರಹಿತ ತಂಡ. ಇದಕ್ಕೂ ಮೀರಿ ಆಯಾಯ ವಲಯದಲ್ಲಿ ಸೂಕ್ಷ್ಮ ಅರ್ಥ ವ್ಯಾಪ್ತಿಯನ್ನು ಹೊಂದಿರುವ ಪ್ರತಿಯೊಬ್ಬ ಆಟಗಾರ. ಇದು ನಮ್ಮ ಈ ಸಾಲಿನ ವಿಶ್ವ ಕಪ್ ಸರಣಿಯ ಭಾರತ ತಂಡ.
ಅಭೂತಪೂರ್ವ ಆಶಾವಾದ, ಸಹಸ್ರ ಹಾರೈಕೆ, ನೂರಾರು ಕನಸು ಮತ್ತೆ ಜಯದ ಮನಸ್ಸು. ಇವೆಲ್ಲಕ್ಕೆ ಪೂರಕ ಎಂಬಂತೆ, ಸಾರ್ವತ್ರಿಕ ಸಮತೋಲನ, ಸಂಘಟಿತ, ಸಂಘರ್ಷ ರಹಿತ ತಂಡ. ಇದಕ್ಕೂ ಮೀರಿ ಆಯಾಯ ವಲಯದಲ್ಲಿ ಸೂಕ್ಷ್ಮ ಅರ್ಥ ವ್ಯಾಪ್ತಿಯನ್ನು ಹೊಂದಿರುವ ಪ್ರತಿಯೊಬ್ಬ ಆಟಗಾರ. ಇದು ನಮ್ಮ ಈ ಸಾಲಿನ ವಿಶ್ವ ಕಪ್ ಸರಣಿಯ ಭಾರತ ತಂಡ.
ಗಂಗೂಲಿ, ನಾಯಕ ವಿಹೀನತೆಯ ಬಳಿಕ, ಕೇವಲ ಕಹಿ ಅನುಭವವನ್ನೇ ಅನುಭವಿಸಿದ ಭಾರತ ತಂಡ ಈ ಬಾರಿ ಪೂರ್ಣ ಪ್ರಮಾಣದಲ್ಲಿ ವಿಶ್ವ ಕಪ್ ಗೆದ್ದುಕೊಳ್ಳಲು ಸಜ್ಜಾಗಿದೆ. ಕಳೆದ ಪಂದ್ಯಗಳತ್ತ ಕಣ್ಣು ಹಾಯಿಸಿ ವಿಶ್ಲೇಷಣೆಗೆ ತೊಡಗಿದರೆ, ತಂಡ ಎಲ್ಲಾ ಸಮಸ್ಯೆಗಳನ್ನು ಮೀರಿ ಉತ್ತಮ ಫಲಿತಾಂಶವನ್ನೇ ಕಂಡಿದೆ. ಈ ಪರಿಪೂರ್ಣ ಗೆಲುವುಗಳು ಇಂದು ಶುರುವಾಗುವ ವಿಶ್ವಕಪ್ ಮೇಲೆ ಶೇ 100 ರಷ್ಟು ಪರಿಣಾಮ ಬಿದ್ದೇ ಬೀಳುತ್ತದೆ ಎನ್ನುವುದು ನಂಬಿಕೆ.
ಧೋನಿಯಿಂದ ತೊಡಗಿ ಶ್ರೀಶಾಂತ್ ವರೆಗೆ ಎಲ್ಲರೂ ಗೆಲುವಿನ ಹಸಿವಿನಲ್ಲಿ ಬೇಯುತ್ತಿದ್ದು, ವಿಶ್ವಕಪ್ Ikon ಎಂದೇ ಕರೆಯಲ್ಪಡುವ ಸಚಿನ್ ಮತ್ತೆ ಯಾವತ್ತಿನಂತೆ ತಮ್ಮ ರನ್ ಹಸಿವೆಯನ್ನು ಜಾಸ್ತಿ ಮಾಡಿಕೊಂಡಿದ್ದಾರೆ. ಇವೆಲ್ಲವೂ ತಂಡಕ್ಕೆ ಡಬಲ್ + ಆಗಲಿದೆ.ಇದೆಲ್ಲವನ್ನೂ ಗಮನಿಸಿ, ನಾವು ಹಿಂದೆಗೂ ಇಂದಿಗೂ ಇತರ ತಂಡಕ್ಕೂ ತಾಳೆ ಹಾಕಿ ನೋಡಿದಾಗ ನಮ್ಮ ತಂಡ ಈ ಬಾರಿಯ ವಿನ್ನಿಂಗ್ ಫೇವರಿಟ್. ಸೊ ಈ ಬಾರಿ ದೇಶ ಗೆದ್ದೇ ಗೆಲ್ಲುತ್ತದೆ ಎಂಬ ಭರವಸೆ ತಂಡಕ್ಕೆ ಹಾಗು ಅಭಿಮಾನಿಗಳಿಗೆ ಬಹಳವಾಗಿ ಇದೆ. ಆದರೂ ಕೆಲವೊಮ್ಮೆ ಎಡವುದು ಮಾಮೂಲು. ಈ ಬಾರಿ ಈ ರೀತಿ ಆಗದೆ ತಂಡ ಕಪ್ ತೆಗೆದುಕೊಳ್ಳಲಿ ಎಂದು ಹೃದಯ ಪೂರ್ವಕವಾಗಿ ಆಶಿಸೋಣ.
-ಡಾ.ಶ್ರೇ
-ಡಾ.ಶ್ರೇ
No comments:
Post a Comment