Tuesday, February 15, 2011

ಸೋತವರು 
ಕೊನೆಗೂ ನಮ್ಮ ಪಕ್ಷೇತರು ಪಕ್ಕೆ ಮುರಿದುಕೊಂಡು ಬಿಟ್ಟಿದ್ದಾರೆ. ಅಂದು ತಾರಕಕ್ಕೇರಿದ ರಾಜಕೀಯ ತೆವಲಿನ ಸಮಯದಲ್ಲಿ ಮುಖ್ಯಮಂತ್ರಿಗಳ ವಿರುದ್ದ ದೂರು ಹಾಗೂ ಸರಕಾರ ಬೀಳಿಸಲು ಪ್ರಯತ್ನ ಮಾಡಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ವಿಧಾನ ಸಭಾ ಸದಸ್ಯತ್ವದಿಂದ ಸಭಾಪತಿ ಅಂದು ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ್ದಾರೆ.
ಇದನ್ನು ಪ್ರಶ್ನಿಸಿ ಹೈ ಕೋರ್ಟ್ ಮೆಟ್ಟಿಲೇರಿದ ಪಕ್ಷೆತರರಿಗೆ, ಹೈ ಕೋರ್ಟ್ ತಮ್ಮ ಪರ ತೀರ್ಪು ನೀಡುವುದು ಎಂದು ಆತ್ಮವಿಶ್ವಾಸದಿಂದ ಬೀಗಿದ್ದರು. ಆದರೆ ನಿನ್ನೆ ಹೊರಬಂದ ತೀರ್ಪಿನಲ್ಲಿ, ಕೋರ್ಟ್ ವಿಧಾನ ಸಭಾ ಅಧ್ಯಕ್ಷರ ನಿಲುವನ್ನು ಸ್ಪಷ್ಟವಾಗಿ ಬೆಂಬಲಿಸಿದೆ. ತುಲನಾತ್ಮಕವಾಗಿ, ತಳ ಸ್ಪರ್ಶವಾಗಿ ಇದನ್ನು ಗಮನಿಸಿದರೆ, ತೀರ್ಪು ಸರಿ ಎಂದು ಅನಿಸಿಬಿಡುತ್ತದೆ. 5 ವರ್ಷಗಳ ಕಾಲ ಆಡಳಿತ ನಡೆಸಲು ಜನ ಒಪ್ಪಿಗೆ ಕೊಟ್ಟ ಮೇಲೆ ಒಂದು ಪಕ್ಷ 5 ವರ್ಷ ಆಡಳಿತ ನಡೆಸಿದರೆ ಎಲ್ಲರಿಗೂ ಒಳಿತು. ಇಲ್ಲವಾದರೆ, ಮತ್ತೆ ರಾಜ್ಯದ ಬೊಕ್ಕಸವೇ ಹಾಳಾಗುವುದು. ಒಂದು ಚುನಾವಣೆ ಎಂದರೆ ಅದೆಷ್ಟು ದುಡ್ಡು ಖರ್ಚಾಗುತ್ತದೆ ಎಂದರೆ, ಅದು ಹೇಳಿ ಸುಖವಿಲ್ಲ. 
ಈ ಹಿನ್ನೆಲೆಯಲ್ಲಿ ಕೇವಲ 10 -16  ಶಾಸಕರಿಂದ ಇಡೀ ಸರಕಾರ ಉಳಿಯುವುದು-ಉರುಳುವುದು ಎಂದರೆ ಇದು ರಾಜಕೀಯ ದುರಂತ. ಇದನ್ನು ಗಮನಿಸಿದರೆ ತೀರ್ಪು ನಿಜವಾಗಿಯೂ ಸಮಂಜಸವಾಗಿದೆ. ಆದರೆ ಈ ತೀರ್ಪನ್ನು ಬದಿಗಿಟ್ಟು ನಾವು ಇಡೀ ಬೆಳವಣಿಗೆಯನ್ನು ಗಮನಿಸಿದರೆ, ಈ ಅನರ್ಹತೆಯ ಕಥೆಯ ಭಾಗ-1 (ಹೈ ಕೋರ್ಟ್), ಭಾಗ-2 (ಸುಪ್ರೀಂ ಕೋರ್ಟ್) ಎಪಿಸೋಡುಗಳಿಂದ ಬಡವಾಗುವುದು, ಅವರು ಗೆದ್ದ ಕ್ಷೇತ್ರ ಮತ್ತು ಕ್ಷೇತ್ರದ ಜನತೆ. ಯಾವತ್ತೂ ಹೀಗೆಯೇ, ರಾಜಕೀಯದಲ್ಲಿ ಯಾರಿಗೆ ಲಾಭವಾದರೂ ಯಾರಿಗೆ ನಷ್ಟವಾದರೂ ಬೇಸತ್ತ ಭಾವ ಮಾತ್ರ ಜನತೆಗೆ ಮುಡಿಪು.
                                           -ಡಾ.ಶ್ರೇ 

No comments:

Post a Comment