Monday, February 14, 2011

ಜೈ ಹೋ!
ನಿನ್ನೆ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ ರೋಚಕ ಜಯ ಗಳಿಸಿದೆ. ಗೆಲುವಿನ ಹತ್ತಿರ ಹತ್ತಿರ ಹೋಗಿದ್ದ ಆಸ್ಟ್ರೇಲಿಯಾ ಕೊನೆಯ ಹಂತದಲ್ಲಿ ಮುಗ್ಗರಿಸಿತು. ಭಾರತದ ಈ ಗೆಲುವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ನಿನ್ನೆ ನಡೆದ ಪಂದ್ಯವನ್ನು ಕಂಡಾಗ, ಈ ಬಾರಿ ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂಬ ನಂಬಿಕೆ ಮೂಡಿದೆ. ನಿನ್ನೆಯ ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ಶಕ್ತಿ ಕೈ ಕೊಟ್ಟರೂ, ಬೌಲರ್ ಗಳು ಅದರಲ್ಲೂ ವಿಶೇಷವಾಗಿ ಸ್ಪಿನ್ನರುಗಳು ತಮ್ಮ ಮಾಂತ್ರಿಕ ಎಸೆತಗಳಿಂದ ಗಮನ ಸೆಳೆದಿದ್ದಾರೆ. 
ವಿಶ್ವಕಪ್ ಗೆ ತಂಡ ಆಯ್ಕೆಯಾದಾಗ, ಟೀಕಾಕಾರರ ಬಾಯಿಗೆ ಆಹಾರವಾಗಿದ್ದ ಪಿಯೂಶ್ ಚಾವ್ಲ ಉತ್ತಮ ಬೌಲಿಂಗ್ ನಡೆಸಿ, ಪಂದ್ಯಕ್ಕೆ ರೋಚಕ ತಿರುವು ತಂದು ಕೊಟ್ಟರು. ಹರ್ಭಜನ್ ಮತ್ತು ಅಶ್ವಿನ್ ಕೂಡ ತಮ್ಮ ಕೆಲಸವನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದಾರೆ. 
ನಿನ್ನೆ ನಡೆದ ಪಂದ್ಯವನ್ನು ವೀಕ್ಷಿಸಿದರೆ, ಭಾರತಕ್ಕೆ ವಿಶ್ವಕಪ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಉಂಟಾಗಿದೆ. ಅದಲ್ಲದೆ ಈ ಬಾರಿ ವಿಶ್ವಕಪ್ ಭಾರತ ಉಪಖಂಡದಲ್ಲಿ ನಡೆಯುತ್ತಿರುವುದರಿಂದ ಭಾರತ ತಂಡಕ್ಕೆ ಉಪಕಾರಿಯಾಗಿ ಪರಿಣಮಿಸಬಹುದು. ಏನೇ ಆಗಲಿ 1983 ನಂತೆ ಈ ಬಾರಿ ಕೂಡಾ  ಭಾರತಕ್ಕೆ ವಿಶ್ವಕಪ್ ಸಿಗಲಿ ಎನ್ನುವುದು ಕೋಟಿ-ಕೋಟಿ ಕ್ರಿಕೆಟ್ ಅಭಿಮಾನಿಗಳ ಮನದ ಬಯಕೆಯಾಗಿದೆ.
ನಿನ್ನೆಯ ಪಂದ್ಯದಿಂದಾಗಿ ತಂಡದ ಆತ್ಮವಿಶ್ವಾಸ ಇಮ್ಮಡಿಯಾಗಿದೆ, ಅದು over confidence ಆಗದಿರಲಿ ಎಂದು ಆಶಿಸೋಣ.
All the best team india.
ಹಾಗೇ ಸುಮ್ಮನೆ- ಪಿಯೂಶ್ ಚಾವ್ಲನ ಸ್ಪಿನ್ ಬಾಲುಗಳನ್ನು ಕಂಡ ಉಮೇಶ, ತುಂಬಾ ಖುಷಿಯಾಗಿ 'ಲಗಾನ್ ಚಿತ್ರದಲ್ಲಿ, ಲೆಗ್ ಸ್ಪಿನ್ ಹಾಕುತ್ತಿದ್ದವನು ಇವನೇ ಇರಬೇಕು' ಎಂಬ ಸಂಶಯ ವ್ಯಕ್ತಪಡಿಸುತ್ತಿದ್ದಾನೆ.
                                                                 -ಡಾ.ಶೆಟ್ಟಿ  

No comments:

Post a Comment