Wednesday, February 2, 2011

ಕೊನೆಗೂ ರೆಡ್ಡಿಗೆ ಗಲ್ಲು 
ವಿಕೃತಕಾಮಿ ಉಮೇಶ್ ರೆಡ್ಡಿ ಗೆ ಗಲ್ಲು ಶಿಕ್ಷೆ ಖಾಯಂ ಆಗಿದೆ. ಹೈಕೋರ್ಟ್ ನೀಡಿದ ಗಲ್ಲು ಶಿಕ್ಷೆಯನ್ನು, ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದು ಉಮೇಶ್ ರೆಡ್ಡಿ ಬದುಕಲು ಯೋಗ್ಯನಲ್ಲ ಎಂಬ ತೀರ್ಮಾನಕ್ಕೆ ಬಂದಿದೆ.
ಈ ರೆಡ್ಡಿ ಸಾಮಾನ್ಯನಲ್ಲ ಹಲವಾರು ಅತ್ಯಾಚಾರಗಳು, ಕೊಲೆಗಳು, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಿದ್ದು ಇತ್ಯಾದಿ ಅಪರಾಧಗಳು ಈತನ ಮೇಲಿದೆ. 12 ವರ್ಷದ ಹಿಂದೆ ವೃದ್ಧೆಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪದಲ್ಲಿ ಈತ ಸಿಕ್ಕಿ ಬಿದ್ದಿದ್ದ. 
ನಮ್ಮ ನ್ಯಾಯ ವ್ಯವಸ್ಥೆ ಎಷ್ಟೊಂದು ಉದಾರವೆಂದರೆ, ಇವನಂತಹ ದುಷ್ಟಜಂತುವನ್ನು 12 ವರ್ಷ ಜೈಲಿನಲ್ಲಿಟ್ಟುಕೊಂಡು ಸಾಕಿದೆ. ಇನ್ನೂ ಸಾಕುತ್ತದೆ ಯಾಕೆಂದರೆ ಸುಪ್ರೀಂ ಕೋರ್ಟಿನಲ್ಲಿ ಗಲ್ಲು ಶಿಕ್ಷೆ ಸಿಕ್ಕಿದ ಕೂಡಲೇ ಆತನನ್ನು ಗಲ್ಲಿಗೇರಿಸುವುದಿಲ್ಲ ಬದಲಾಗಿ ರೆಡ್ಡಿ , 'ನನಗೆ ಕ್ಷಮಾದಾನ ನೀಡಬೇಕು' ಎಂದು ರಾಷ್ಟ್ರಪತಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಆತ ಅರ್ಜಿ ಸಲ್ಲಿಸಿ, ಅದನ್ನು ಮಾನ್ಯ ರಾಷ್ಟ್ರಪತಿಯವರು ಪರಿಶೀಲಿಸಿ, 'ಗಂಭೀರ' ಚರ್ಚೆ ನಡೆಸಿ; ಆತನಿಗೆ ಗಲ್ಲು ಶಿಕ್ಷೆ ನೀಡುವುದೋ? ಬೇಡವೋ? ಎಂಬ ನಿರ್ಧಾರಕ್ಕೆ ಬರುವಾಗ ಇನ್ನು 10 ವರ್ಷ ಕಳೆದಿರುತ್ತದೆ. 
ಒಟ್ಟಿನಲ್ಲಿ ಉಮೇಶ್ ರೆಡ್ಡಿ ಹೊರಗಿರುವುದಕ್ಕಿಂತ, ಜೈಲಿನಲ್ಲಿಯೇ ಆರಾಮವಾಗಿ ಕಾಲ ಕಳೆಯುತ್ತಿದ್ದಾನೆ. ಈತನಿಂದ ತೊಂದರೆಗೊಳಗಾದ ಹೆಣ್ಣು ಮಕ್ಕಳ ಬಾಳು, ಅವರ ಕುಟುಂಬದವರ ಗೋಳು ವ್ಯರ್ಥವಾಗಿದೆ. 
ಉಮೇಶ್ ರೆಡ್ಡಿಯನ್ನು ಇಷ್ಟು ವರ್ಷ ಬದುಕಲು ಬಿಟ್ಟ ನಮ್ಮ ದೇಶ ನಿಜಕ್ಕೂ ಗ್ರೇಟ್ ಅಲ್ಲವೇ?
ಹಾಗೇ ಸುಮ್ಮನೆ - ಈ ಉಮೇಶ್ ರೆಡ್ಡಿಯಿಂದಾಗಿ ಹೆಚ್ಚು ತೊಂದರೆ ಅನುಭವಿಸಿರುವುದು ನಮ್ಮ ಉಮೇಶ. ಯಾಕೆಂದರೆ ಯಾವ ಹುಡುಗಿಗೆ propose ಮಾಡಿದರು, ಈತನ ಉಮೇಶ ಎಂಬ ಹೆಸರು ಕೇಳಿಯೇ ಹುಡುಗಿಯರು ಒಪ್ಪಲ್ಲವಂತೆ.
                                                                   -ಡಾ.ಶೆಟ್ಟಿ 

No comments:

Post a Comment