Monday, February 7, 2011

ಹ(ಧ್ವ)೦ಸರಾಜ್ ಹೊಸ ರಾಗ
'ಹೆಮ್ಮೆಯ ಕಾಂಗ್ರೆಸಿಗ' ಮತ್ತೊಮ್ಮೆ ವಿವಾದ ಎಬ್ಬಿಸಿದ್ದಾರೆ. ರಾಜ್ಯದ ರಾಜ್ಯಪಾಲರಾಗಿ ಬಂದ ನಂತರ ಸದಾ ಒಂದಿಲ್ಲೊಂದು ವಿಷಯಗಳಿಗೆ ಸುದ್ದಿಯಲ್ಲಿದ ಹಂಸರಾಜ್ ಭಾರದ್ವಾಜ್ ಅವರು ಈಗ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ರಾಜ್ಯಪಾಲರಾದವರು ರಾಜಕೀಯಕ್ಕೆ ಇಳಿಯಬಾರದು, ಅದೇ ತರ ರಾಜಕಾರಣ ಮಾಡಬಾರದು ಎಂಬುವುದು ನಿಯಮ. ಆದರೆ ರಾಜ್ಯಪಾಲರು ಏನೇನ್ನನ್ನೋ ಮಾಡಿದ್ದಾರೆ, ಮಾಡಿದರೆ ಮಾಡಲಿ ಬಿಡಿ, ಅದು ಅವರ ಪ್ರಾರಬ್ಧ! ಆದರೆ ಗೌರವ ಡಾಕ್ಟರೇಟ್ ನೀಡುವ ವಿಚಾರದಲ್ಲೂ ಕೂಡಾ ರಾಜಕಾರಣ ಮಾಡುತ್ತಿರುವುದು ನಾಚಿಗೇಡಿನ ಸಂಗತಿ. 
ಚಿದಾನಂದ ಮೂರ್ತಿಯವರು, 'ಚರ್ಚ್ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರಂತೆ, ಹಾಗೂ ಅದರಿಂದ ಅಲ್ಪಸಂಖ್ಯಾತರಿಗೆ ನೋವಾಗಿದೆಯಂತೆ.' ಇದು ಚಿದಾನಂದ ಮೂರ್ತಿ ಅವರಿಗೆ ಡಾಕ್ಟರೇಟ್ ನೀಡದಿರಲು ಕಾರಣ. ಅಲ್ಪಸಂಖ್ಯಾತರೆಲ್ಲ ಸೇರಿಕೊಂಡು, ರಾಜ್ಯಪಾಲರ ಬಳಿ ' ದಮ್ಮಯ್ಯ, ಚಿದಾನಂದ ಮೂರ್ತಿಯವರಿಗೆ ಡಾಕ್ಟರೇಟ್ ನೀಡಬೇಡಿ' ಎಂದು ಕೇಳಿಕೊಂಡಂತೆ ವರ್ತಿಸುತಿದ್ದಾರೆ ರಾಜ್ಯಪಾಲರು.
ಅಲ್ಪಸಂಖ್ಯಾತರ ಆಯೋಗವಾಗಲಿ, ಸಂಘಟನೆಗಳಾಗಲಿ ಯಾವುದು ಕೂಡಾ ಚಿದಾನಂದ ಮೂರ್ತಿಯವರಿಗೆ ಡಾಕ್ಟರೇಟ್ ನೀಡಬಾರದೆಂದು ಹೇಳಿಲ್ಲ. ಯಾರಿಗೂ  ಗೊತ್ತಾಗದ ಹೊಸ ವಿಚಾರವೊಂದು ನಮ್ಮ ಘನತೆವೆತ್ತರಿಗೆ ಹೊಳೆದಿದೆ.
ಚಿದಾನಂದಮೂರ್ತಿಯವರು ಸಾಮಾನ್ಯ ಸಾಧಕರೇನಲ್ಲ. ಕನ್ನಡ ಸಾಹಿತ್ಯದಲ್ಲಿ, ಸಾಹಿತ್ಯ ಸಂಶೋಧನೆಯಲ್ಲಿ ಅವರೊಬ್ಬರು ಧ್ರುವ ನಕ್ಷತ್ರದಂತೆ. ಅವರಿಗೆ ಡಾಕ್ಟರೇಟ್ ನೀಡದರೆ, ಆ ಪ್ರಶಸ್ತಿಗೆ ಗೌರವವೇ ವಿನಹ ಆ ಡಾಕ್ಟರೇಟ್ ನಿಂದ ಸಿಗುವ ಗೌರವ, ಅವರಿಗೆ ಬೇಕಿಲ್ಲ.
ವಾಸ್ತವದಲ್ಲಿ  ಚಿದಾನಂದ ಮೂರ್ತಿಯವರು, 'ನನಗೆ ಡಾಕ್ಟರೇಟ್ ನೀಡಿ' ಎಂದು ಎಲ್ಲೂ ಕೇಳಿಕೊಂಡಿಲ್ಲ. ಬೆಂಗಳೂರು ವಿ.ವಿ ಆ ಕುರಿತಾಗಿ ಚಿಂತಿಸಿ, ಮೂರ್ತಿಯವರಿಗೆ ಗೌರವ ಡಾಕ್ಟರೇಟ್ ನೀಡಬೇಕೆಂದು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿತ್ತು. ಆದರೆ ಚಿದಾನಂದ ಮೂರ್ತಿಯವರು ಬಲಪಂಥೀಯರು ಎಂಬ ಒಂದೇ ಕಾರಣಕ್ಕೆ ಡಾಕ್ಟರೇಟ್ ನಿರಾಕರಿಸಿದ್ದಾರೆ.
ವೈಯುಕ್ತಿಕ ವಿಚಾರಗಳು ಬೇರೆ, ಸಾಧನೆ ಬೇರೆ. ಚಿದಾನಂದ ಮೂರ್ತಿಯವರ ವೈಯುಕ್ತಿಕ ವಿಚಾರಗಳು ಏನೇ ಇರಲಿ, ಅವರೊಬ್ಬ ಸಾಧಕ. ಇಡೀ ಕರ್ನಾಟಕ ಹೆಮ್ಮೆ ಪಡುವಂತಹ ಸಾಧಕ. ಇಲ್ಲವಾದರೆ ಅವರಿಗೆ ಆದ ಅನ್ಯಾಯವನ್ನು, ಅನಂತಮೂರ್ತಿಯಂತವರು ಖಂಡಿಸುತ್ತಿರಲಿಲ್ಲ.
ರಾಜ್ಯಪಾಲರು ಯಾರದೋ ಹಿತ ಕಾಯಲು ಹೋಗಿ, 6 ಕೋಟಿ ಕನ್ನಡಿಗರನ್ನು ಅವಮಾನಿಸಿದ್ದಾರೆ.
ಹಾಗೇ ಸುಮ್ಮನೆ- ಚಿದಾನಂದ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರಾಕರಿಸಿದ ರಾಜ್ಯಪಾಲರ ಕ್ರಮದಿಂದ, ಉಮೇಶ ವಿಪರೀತ ಸಿಟ್ಟಾಗಿದ್ದಾನೆ. ಅವನಿಗೆ ಸಿಕ್ಕಿದ 'ಕುಡಿಯರ ಕುಲ ತಿಲಕ' ಪ್ರಶಸ್ತಿಯನ್ನು, ಸರಕಾರಕ್ಕೆ ಹಿಂದುರುಗಿಸಿ ತನ್ನ ಪ್ರತಿಭಟನೆ ವ್ಯಕ್ತಪಡಿಸಿದ್ದಾನೆ.
                                                             -ಡಾ.ಶೆಟ್ಟಿ 

No comments:

Post a Comment