Saturday, March 26, 2011

ಲಿಬಿಯಾದ ಗತಿ ಏನು?
ಅಮೆರಿಕಾ ಮಿತ್ರ ರಾಷ್ಟ್ರಗಳು ಲಿಬಿಯಾದಲ್ಲಿ 'ಶಾಂತಿ'ಗಾಗಿ ಹೋರಾಡುತ್ತಿವೆ. ನಾಗರಿಕರ ಪ್ರತಿಭಟನೆಯಿಂದಾಗಿ ಅರಾಜಕತೆ ಉಂಟಾಗಿದ್ದ ಲಿಬಿಯಾದಲ್ಲಿ ಮಿತ್ರರಾಷ್ಟ್ರಗಳ ಸೈನಿಕರ ಬೂಟಿನ ಸದ್ದು ಕೇಳಿಸುತ್ತಿದೆ. ಮಿತ್ರರಾಷ್ಟ್ರಗಳ ಹೋರಾಟಕ್ಕೆ ವಿಶ್ವಸಂಸ್ಥೆ ಕೂಡ ಹಸಿರು ನಿಶಾನೆ ತೋರಿದೆ. 
ಲಿಬಿಯಾದಲ್ಲಿ ಪ್ರಜಾಪ್ರಭುತ್ವದ ಹೋರಾಟಕ್ಕೆ ಬೆಂಬಲ ನೀಡುವುದು ಪ್ರಶಂಸನೀಯ, ಆದರೆ ಶಾಂತಿ ಸ್ಥಾಪನೆಯ ಹೆಸರು ಹೇಳಿಕೊಂಡು ಮುಗ್ದ ಜನರ ಹತ್ಯೆಯಾಗುವುದು ಎಷ್ಟು ಸರಿ?
ಲಿಬಿಯಾದಲ್ಲಿ ಶಾಂತಿ ಸ್ಥಾಪಿಸಲು ಅಮೆರಿಕಾ ಮಾಡಿಟ್ಟಿರುವ ಪ್ರಯತ್ನದಲ್ಲಿ ಸ್ವಹಿತಾಸಕ್ತಿ ಇರುವುದು ಮಾತ್ರ ಸ್ಪಷ್ಟ ಸಂಗತಿ, ಯಾಕೆಂದರೆ ಅಮೆರಿಕಾ ಎಂಬ ಕುತಂತ್ರಿ ರಾಷ್ಟ್ರ ಲಾಭವಿಲ್ಲದೆ ಯಾವ ಕೆಲಸವನ್ನು ಕೂಡ ಮಾಡುವುದಿಲ್ಲ! ಅಮೆರಿಕಾದ ಕುತಂತ್ರವನ್ನು ತಿಳಿದುಕೊಳ್ಳಲು ಸೌದಿ ಅರೇಬಿಯಾ ಎಂಬ ದೇಶದ ಇತಿಹಾಸವನ್ನು ಒಮ್ಮೆ ನೆನಪು ಮಾಡಿಕೊಳ್ಳಿ.. 
ಅದೊಂದು ಕಾಲ, ಸೌದಿ ಎಂಬ ಪುಟ್ಟ ರಾಷ್ಟದಲ್ಲಿ ತೈಲ ಸಂಪತ್ತು ಅಪಾರವಾಗಿದೆ ಎಂಬ ವಿಚಾರ ಜಗತ್ತಿನ ಯಾವ ದೇಶಕ್ಕೂ ಗೊತ್ತಿರಲಿಲ್ಲ, ಆಗ ಸೌದಿಯನ್ನು ಹಷಿಮೈತ್ ಮತ್ತು ಸೌದಿ ಎಂಬ ೨ ರಾಜ ವಂಶಗಳು ಆಳುತ್ತಿದ್ದವು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟರೆ ಸೌದಿ ಶಾಂತವಾಗಿಯೇ ಇತ್ತು. ಆದರೆ ಯಾವಾಗ ಸೌದಿಯ ಗರ್ಭದಲ್ಲಿ ತೈಲ ನಿಕ್ಷೇಪಗಳು ಇದೆ ಎಂಬ ವಿಚಾರ ಗೊತ್ತಾಯಿತೋ, ಅಮೆರಿಕಾದ ಕಿವಿ ನೆಟ್ಟಗಾಯಿತು, ಹೇಗಾದರೂ ಮಾಡಿ ಸೌದಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿತು. ಅದಕ್ಕಾಗಿ ಹಷಿಮೈತ್ ರಾಜ ವಂಶದ ಮೇಲೆ ಸೌದಿಯ ರಾಜರನ್ನು ಎತ್ತಿ ಕಟ್ಟಿದರು, ಸೌದಿ ರಾಜ ವಂಶಕ್ಕೆ ಆಯುಧ, ಸೈನ್ಯ ಮುಂತಾದ ಬೆಂಬಲ ನೀಡಿ, ಹಷಿಮೈತ್ ಗಳನ್ನು ನಿರ್ನಾಮ ಮಾಡಿ ಬಿಟ್ಟರು. ಅದರ ಫಲವಾಗಿ ಇಂದಿಗೂ ಸೌದಿ ಎಂಬ ರಾಷ್ಟ್ರ ದೊಡ್ಡಣ್ಣನಿಗೆ ನಿಷ್ಠವಾಗಿಯೇ ಇದೆ! ಸೌದಿಯಲ್ಲಿ ನಡೆಯುವ ತೈಲ ವ್ಯವಹಾರದಲ್ಲಿ ಅಮೆರಿಕಾಕ್ಕೆ ಸಿಂಹಪಾಲು ದೊರೆಯುತ್ತಿದೆ, ಸೌದಿ ದೊರೆಯ ಆಸ್ಥಾನದಲ್ಲಿ ಅಮೆರಿಕಾದ ಪ್ರತಿನಿಧಿ ಇದ್ದಾನೆ, ಅವನು ಹೇಳಿದಕ್ಕೆಲ್ಲ ತಲೆಯಾಡಿಸುವುದೆ ಸೌದಿ ದೊರೆಯ ಕೆಲಸ!
ಲಿಬಿಯಾ ಎಂಬ ದೇಶ ಕೂಡ ತೈಲ ಸಂಪತ್ತಿನಿಂದ ಸಮೃದ್ಧವಾಗಿದೆ, ನಾಗರಿಕರ ದಂಗೆಯ ಹೆಸರು ಹೇಳಿಕೊಂಡು ಅಮೆರಿಕಾ ಅಲ್ಲಿ ತನ್ನ ಬೇಳೆ ಬೇಯಿಸುವ ಪ್ರಯತ್ನ ಮಾಡುತ್ತಿದೆ, ಅದರಲ್ಲಿ ಯಶಸ್ಸು ಕೂಡ ಪಡೆಯಬಹುದು. ಆದರೆ ಹಾಗಾಗದಿರಲಿ ಎಂಬುವುದೇ ಎಲ್ಲರ ಹಾರೈಕೆ. 
ಲಿಬಿಯಾದಲ್ಲಿ ಪ್ರಜಾಪ್ರಭುತ್ವ ಬರಲಿ, ಆದರೆ ಮುಗ್ಧ ನಾಗರಿಕರ ಮತ್ತು ಅಮೆರಿಕಾದ ಅಟ್ಟಹಾಸ ನಿಲ್ಲಲಿ.
ಹಾಗೇ ಸುಮ್ಮನೆ - ಜಪಾನ್ ನಲ್ಲಿ ಸುನಾಮಿ ಬರಲು ಅಮೆರಿಕಾ ಕಾರಣ ಎಂಬ ಹೊಸ ವಾದವನ್ನು ಕೇಳಿದ ಉಮೇಶ, ನಮ್ಮ ಉತ್ತರ ಕರ್ನಾಟಕದಲ್ಲಿ ಕೂಡ ನೆರೆ ಬರಲು ಅಮೆರಿಕಾವೇ ಕಾರಣವಾಗಿರಬಹುದು ಎಂದು ಶಂಕಿಸುತ್ತಿದ್ದಾನೆ.
                                                                         -ಡಾ.ಶೆಟ್ಟಿ 

No comments:

Post a Comment