Thursday, March 17, 2011

ಕಹಿ ಕಹಿ ನೆನಪು..
ಮೋಪ್ಲಾ ಕಾಂಡದ ನೆನಪು ಮಾಡಿದ ಕೂಡಲೇ ಕಣ್ಣಿಗೆ ಕಟ್ಟಿದಂತೆ ಆಗುವುದು ಹಿಂದೂಗಳ ಮಾರಣ ಹೋಮ. ಇದರ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ ವಹಿಸಿದಂತೆ ವಿಕೃತಿಗಳು ಮತ್ತಷ್ಟು ಜನನವಾಗುತ್ತಲೇ ಹೋಗುತ್ತವೆ. ಇಲ್ಲಿ ಒಂದು ರೀತಿಯ ವಿಚಿತ್ರ ವಿಕೃತ ಮನೋಭಾವವನ್ನು ನಾವು ಕಾಣಬಹುದು. 
ಗಾಂಧೀ ಪ್ರವರ್ತಿತ ಕಿಲಾಫಾತ್ ಚಳುವಳಿಯ ನೇರ ಪರಿಣಾಮವಾಗಿ 1921 ರಲ್ಲಿ ಕೇರಳದಲ್ಲಿ ನಡೆದ ಮೋಪ್ಲಾ ಬಂಡಾಯದ ಚಿತ್ರಣ ಮುಂದೆ ಕಾಡ್ಗಿಚ್ಚಿನಂತೆ ಬೆಳೆಯುತ್ತಲೇ ಹೋಗುತ್ತದೆ. 
ಮೊಪ್ಲಾಗಳು(ಮಾಪಿಳ್ಳೆ) ಶ್ರೀಮಂತ ಹಿಂದೂ ಮಹಿಳೆಯರನ್ನು ಮುಸ್ಲಿಂ ಕೂಲಿಗಳಿಗೆ ಮದುವೆ ಮಾಡಿ ಕೊಟ್ಟರು. ನಂತರ ಅತ್ಯಾಚಾರವನ್ನು ದಿನದೂಟದಂತೆ ಮಾಡುತ್ತಿದ್ದರು. ಇದರ ಎಲ್ಲದರ ಎದುರುಗಡೆ ಹೋರಾಡಲಾಗದೆ ಮಹಿಳೆಯರು ಉಡಲು ಸರಿಯಾದ ಬಟ್ಟೆಗಳಿಲ್ಲದೆ ದಟ್ಟ ಕಾಡಿನಲ್ಲಿ ಅವಿತು ಕುಳಿತರು. ಆಗಿನ ವೈಸರಾಯ್ ಪತ್ನಿಗೆ ಪತ್ರಗಳ ಮೂಲಕ ತಮ್ಮ ಗೋಳನ್ನು ಹೇಳಿಕೊಂಡು ಅಂಗಲಾಚಿದರು. ಈ ರೀತಿ ಚಳುವಳಿಯ ಇನ್ನೊಂದು ಕರಾಳ ಮುಖ ನಮಗೆ ಕಾಣ ಸಿಗುತ್ತದೆ.
                                                               -ಕೆ.ಪಿ.ಭಟ್     

No comments:

Post a Comment