Tuesday, March 1, 2011

ಬ್ಯಾಲನ್ಸ್ ಬಜೆಟ್
ಮುಖರ್ಜಿಯವರು ನಿನ್ನೆ ಮಂಡಿಸಿದ ಬಜೆಟ್ ಸಮಾಧಾನಕರವಾಗಿದೆ  ಎಂದರೆ ತಪ್ಪಾಗಲಾರದು.  ಇವರ ಬಜೆಟಿನಲ್ಲಿ ಮೋಡದ  ಮರೆಯಿಂದ ಚಂದ್ರ ಆಗಾಗ ಬಂದು ಕಾಣುವಂತೆ ಇವರ ಬಜೆಟ್ ನಲ್ಲಿ ಶ್ರೀ ಸಾಮಾನ್ಯ ಒಮ್ಮೊಮ್ಮೆ ಕಾಣುತ್ತಾನೆ. 
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯವರ ವೇತನ ದುಪ್ಪಟ್ಟುಗೊಳಿಸಿ, ಅತೀ ಕನಿಷ್ಠ ವೇತನ ಪಡೆಯುತ್ತಿದ್ದವರೆಂಬ ಕೀಳರಿಮೆಯಿಂದ ಹೊರಬರುವಂತೆ ಮಾಡಿದ್ದಾರೆ. income tax slab ತಕ್ಕ ಮಟ್ಟಿಗೆ ಏರಿಕೆಯಾಗಿದೆ.ಒಂದೆಡೆ ಕೃಷಿಕರ ಕಣ್ಣೋರೆಸಿದರೆ, ಮತ್ತೊಂದೆಡೆ ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಮತ್ತು ದೂರ ಸಂಪರ್ಕಕ್ಕೆ ಒತ್ತು ನೀಡಿದ್ದಾರೆ. ಇನ್ನೊಂದೆಡೆ ಸಿಮೆಂಟ್, ಮೊಬೈಲ್,ಸೈಕಲ್, ಹೊಲಿಗೆಯಂತ್ರಗಳು, ಬ್ರಾಂಡೆಡ್ ಉಡುಪುಗಳು, ವಿಮಾನಯಾನ, ಆಭರಣ, ಹವಾನಿಯಂತ್ರಿತ ಬಾರ್, ಖಾಸಗಿ ಆಸ್ಪತ್ರೆಗಳು, ಹೋಟೆಲ್ ಸೇವೆ, ಇದರ ಜೊತೆ ಔಷಧಿ ಮೊದಲಾದ ಮೂಲಭೂತ ವಸ್ತುಗಳ ಬೆಲೆ ಏರಿಕೆಯಾಗಿದೆ.
ಈ ರೀತಿಯಾಗಿ ಒಂದು ಏರಿ, ಒಂದು ಇಳಿದು; ಒಂದು ಎದ್ದು, ಮತ್ತೊಂದು ಬಿದ್ದು ಒಟ್ಟಾರೆಯಾಗಿ ಅಲ್ಲೂ ಇಲ್ಲ, ಇಲ್ಲೂ ಇಲ್ಲ. ಅಲ್ಲೂ ಎದೆ ಇಲ್ಲೂ ಇದೆ ಎನ್ನುವ ರೀತಿಯಲ್ಲಿ 2G ಹಗರಣವನ್ನು ಮರೆಮಾಚುವ ಹಪಾಹಪಿಯಲ್ಲಿ ಜನರನ್ನು, ಕ್ಷಮಿಸಿ ಮತದಾರರನ್ನು ಓಲೈಸುವ ಪ್ರಯತ್ನ ಮಾಡಿದ್ದಾರೆ. ಒಟ್ಟು 12,57,729 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿ ತಕ್ಕ ಮಟ್ಟಿಗೆ ಮತದಾರರನ್ನು ಓಲೈಸಿದ್ದಾರೆ. ಆದರೂ ಇದನ್ನು ಮಂಕು ಕವಿದ ಬಜೆಟ್ ಎಂದೇ ಕರೆಯಬಹುದು.
                                                -ಡಾ.ಶ್ರೇ 

No comments:

Post a Comment