Friday, March 4, 2011

ಮೂರ್ತಿಯವರು ನಿಮಗೇನು ಮಾಡಿದ್ದಾರೆ?
ಎನ್.ಆರ್ ನಾರಾಯಣ ಮೂರ್ತಿಯವರನ್ನು ಬೆಳಗಾವಿ ಕನ್ನಡ ಸಮ್ಮೇಳನಕ್ಕೆ ಆಯ್ಕೆಮಾಡಿದ್ದು ನನ್ನ ಪ್ರಕಾರ ಸರಿಯಾಗಿದೆ. 
ಅದೃಷ್ಟವಿದ್ದರೆ ಅರ್ಹತೆಯನ್ನು ಮಣಿಸುತ್ತದೆ ಎನ್ನುವ ಮಾತಿಗೆ ತದ್ವಿರುದ್ದವಾಗಿ ಅರ್ಹತೆ ಇದ್ದರೆ ಮಾತ್ರ ಅವರುಗಳಿಗೆ ವಿಪುಲ ಉದ್ಯೋಗ ಅವಕಾಶ ಒದಗಿಸುವ ಇವರನ್ನು ಉದ್ಘಾಟಕರನ್ನಾಗಿ ಆಯ್ಕೆ ಮಾಡಿದಲ್ಲಿ ತಪ್ಪಿಲ್ಲ. ಕನ್ನಡ ಸಮ್ಮೇಳನಕ್ಕೆ ಯೋಗ್ಯವಾದ ಆಯ್ಕೆ ಎನ್ನಬಹುದು. ಇನ್ಫೋಸಿಸ್ ನಾರಾಯಣ ಮೂರ್ತಿಯವರನ್ನು  ಕನ್ನಡ ನಾಡಿನ ಹೆಮ್ಮೆಯ ಪುತ್ರ ಎಂದೇ ಕರೆಯಬಹುದು. ಎಲ್ಲೋ ಒಂದು ಮೂಲೆಯಲ್ಲಿ ನಾರಾಯಣ ಮೂರ್ತಿಯವರ ಹೆಸರು ಹೇಳಿದರೆಂದರೆ ಅದು ಕನ್ನಡ ನಾಡನ್ನು ನೆನಪು ಮಾಡಿದಂತೆ 
ಉದ್ಯೋಗವಕಾಶಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ವಿದೇಶಗಳಿಗೆ ತೆರಳುವಂತಹ ಅದೆಷ್ಟೋ ಇಂಜಿನಿಯರ್ ಹಾಗು ಪದವೀದರರು ನಮ್ಮ ನಾಡಿನಲ್ಲಿಯೇ ಇದ್ದು ಉತ್ತಮ ಸಂಪಾದನೆ ಮಾಡುತ್ತಿದ್ದಾರೆ. ದಾರಾಳವಾಗಿ ಕೈ ತುಂಬಾ ಸಂಪಾದನೆ ಮಾಡುತ್ತಾ  ನಮ್ಮ ನಾಡಿನಲ್ಲಿ ಉಳಿದದ್ದು ಇಂದು ಬೆಂಗಳೂರು ನಗರ ಬೆಳೆಯುವುದಕ್ಕೆ ಪೂರಕವಾಗಿದ್ದಾರೆ. 
ಮನಸ್ಸಿನ ತೀಟೆಯನ್ನು ತೀರಿಸಲು ಕವಿತೆ ಹಾಗು ಬರಹಗಳನ್ನು ಬರೆದ ಕೂಡಲೇ ಅದು ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲ.  ಶಿಶುನಾಳ ಶರೀಫ್ ರಂತಹ ಬರವಣಿಗೆಯು ಬಂದಾಗ ಅಂತಹ ವ್ಯಕ್ತಿಗಳಿಗೆ ಮಣೆ ಹಾಕಬಹುದು. ಬರಹದಲ್ಲಿ ಅರಿವಿನ ಜೊತೆಗೆ ಒಳಿತುಗಳು ಸಾಕಷ್ಟು ಇರಲಿ ಎನ್ನುವುದು ನನ್ನ ಭಾವನೆ. ಇದರ ಅರ್ಥ ಕನ್ನಡ ನಾಡಿನಲ್ಲಿ ಶ್ರೇಷ್ಠ ಸಾಹಿತಿಗಳು ಇಲ್ಲವೇನೆಂದಲ್ಲ. ಆದರೆ ನಾರಾಯಣ ಮೂರ್ತಿಯವರ ಬಗ್ಗೆ ಕೀಳಾಗಿ ಮಾತಾಡುವುದು ಸರಿಯಲ್ಲ. 
ಅದೆಷ್ಟೋ ಸಾಹಿತಿಗಳ ಮಕ್ಕಳು ಇಂದು ಅದೇ ಇನ್ಫೋಸಿಸ್ ನಲ್ಲಿ ಲಕ್ಷ ಲಕ್ಷ ಎಣಿಸುತ್ತಿಲ್ಲವೇ? ಅದೇ ಹಣದಿಂದ ದೇಶ ವಿದೇಶ ಸುತ್ತುವ ಅದೆಷ್ಟೋ ಸಾಹಿತಿಗಳು ತಮ್ಮ ಅನುಭವಗಳನ್ನು ಕನ್ನಡ ಸಾಹಿತ್ಯಕ್ಕೆ ಬಟ್ಟಿ ಇಳಿಸಲಿಲ್ಲವೇ ? ಈ ರೀತಿಯ ಪ್ರವಾಸ ಕಥನ ಎಲ್ಲವುಗಳನ್ನೂ ಬರೆಯುವಲ್ಲಿ ಎಲ್ಲೊ ಒಂದು ಮೂಲೆಯಲ್ಲಿ ಇವರ ಪ್ರಭಾವ ಇದೆ ಎಂದು ಹೇಳಿದರೆ ತಪ್ಪಾಗಲಾರದು.
                                                              -ಕೆ.ಪಿ.ಭಟ್ 

No comments:

Post a Comment