Tuesday, March 15, 2011

ಎಂದೂ ಮರೆಯದ ಮಹಾನ್ ಯೋಧ!
ಎಲ್ಲವೂ ಸರಿಯಾಗಿದ್ದರೆ ಆತ ಇಂದು ತನ್ನ ಬೆಂಗಳೂರಿನ ಮನೆಯಲ್ಲಿ, ಹುಟ್ಟು ಹಬ್ಬದ ಕೇಕು ಕತ್ತರಿಸುತ್ತಾ ಇರುತ್ತಿದ್ದ. ಎಲ್ಲರಂತೆ ಎಂಜಿನಿಯರಿಂಗ್, ಮೆಡಿಕಲ್ ಆಯ್ದುಕೊಂಡಿದ್ದರೆ ಇಂದು ಆತ ಅವನ ಗರ್ಲ್ ಫ್ರೆಂಡ್ ಜೊತೆ, ಕಾಫಿ ಡೇ ಯಲ್ಲಿ ಕಾಫಿ ಹೀರುತ್ತಿದ್ದ. ಆದರೆ ಆತ ಹಾಗಾಗಲಿಲ್ಲ, ದೇಶ ಸೇವೆಗೆ, ದೇಶಭಕ್ತಿಗೆ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟ. ದೇಶದ ಮಾನ ಕಾಪಾಡಲು ತನ್ನ ಪ್ರಾಣವನ್ನೇ ಬಲಿ ನೀಡಿದ, ಈತನೇ ದೇಶ ಕಂಡ  ಮಹಾನ್ ಯೋಧ, ಅಶೋಕಚಕ್ರ ದಿ.ಮೇಜರ್ ಸಂದೀಪ್ ಉನ್ನಿಕೃಷ್ಣನ್! 
ಅಂದು ನವೆಂಬರ್, 26 , 2008 ದೇಶದ ವಾಣಿಜ್ಯನಗರಿ ಮುಂಬೈ, ಪಾಕ್ ಉಗ್ರಗಾಮಿಗಳ ದಾಳಿಗೊಳಗಾಯಿತು. ಕೆಲ ಷಂಡ ಉಗ್ರಗಾಮಿಗಳ ಕುತಂತ್ರಕ್ಕೆ ದೇಶ ಮುಗ್ಧ ನಾಗರಿಕರ ಜೊತೆ ಕೆಲ ಧೀರ ಯೋಧರನ್ನು ಕೂಡ ಕಳಕೊಂಡಿತು. ಅದರಲ್ಲಿ N.S.G (national security guards) ನ ಯೋಧ ಸಂದೀಪ್ ಉನ್ನಿಕೃಷ್ಣನ್ ಒಬ್ಬರು.
ದೇಶದ ಯುವಕರು ಪಬ್ಬು, ಕ್ಲಬ್ಬು, ಹೆಣ್ಣು, ಹೆಂಡ ಎಂದು ತಿರುಗುವಾಗ, ಸಂದೀಪ್ ದೇಶ ಕಾಯುವ ಯೋಧನಾಗಬೇಕು ಎನ್ನುವ ಕನಸು ಕಂಡವರು. ಇವರಿಗೆ ಬಾಲ್ಯದಲ್ಲೇ ಅವರ ತಂದೆ ತಾಯಿಗಳು ದೇಶಭಕ್ತಿಯ ಶಿಕ್ಷಣವನ್ನು ಜೋಡಿಸಿದ್ದರು. ಸಂದೀಪ್ ಅವರು ಎಂಜಿನಿಯರ್, ಡಾಕ್ಟರ್ ಆಗಿ ಲಕ್ಷ ಲಕ್ಷ ಎನಿಸಬೇಕು ಎನ್ನುವ ಲಕ್ಷ್ಯವನ್ನು ಹೊಂದದೆ, ದೇಶದಲ್ಲೇ ಅತ್ಯುನ್ನತವಾದ N.S.G ಯಲ್ಲಿ ಯೋಧನಾಗಿ ಸೇರಿಕೊಂಡರು ಆದರೆ ದುರ್ಧೈವವೆಂದರೆ, ಸಂದೀಪ್ ಎನ್ನುವ ದೀಪ ಪ್ರಕಾಶಮಾನವಾಗಿ ಉರಿಯುತ್ತಿರುವಾಗಲೇ ನಂದಿ ಹೋಯಿತು. ಅದು ದೇಶಕ್ಕಾದ ಮಹಾನ್ ನಷ್ಟ.
ಇಂದು ಸಂದೀಪ್ ಅವರ 34 ನೇ ಹುಟ್ಟುಹಬ್ಬ, ಅವರಂತಹ ಧೀರ ಯೋಧ ನಮ್ಮೊಂದಿಗೆ ಇರದಿರುವುದು ದುರಂತ. ಬೆಂಗಳೂರಿನ ಸಂದೀಪ್ ಅವರ ಮನೆಯಲ್ಲಿ ತಂದೆ ತಾಯಿ, ಅವರ ಪೋಟೋದ ಎದುರು ಅಳುತ್ತಿದ್ದರೆ, ಇತ್ತ ಮುಂಬೈ ದಾಳಿಯ ಉಗ್ರ ಕಸಬ್; ನಮ್ಮ ದೇಶದ ಜೈಲಿನಲ್ಲಿ ಕೂತು ಹೊಟ್ಟೆಭರ್ತಿ ತಿನ್ನುತ್ತಿದ್ದಾನೆ! ನಿಜಕ್ಕೂ ನಮ್ಮ ಭಾರತ ಗ್ರೇಟ್!
                                                              -ಡಾ.ಶೆಟ್ಟಿ 

1 comment:

  1. deshabhakti kEvala sainikarige sImitavaagiddu... mahaan dEshabhaktaraMte vartisuva namma raajakIya naayakaru becchane malagiruvaaga..... praaNa kaLedukoMdavaru nimmaMta barahagaarariMda avara nenapu varshakkommeyaadarU aaguttade ennuvudu saMtasada vishayavaagide. So thanks for ur superb writing.............
    Thara Gowda

    ReplyDelete