'ಕರಡಿ' ಹಿಡಿದ ಬಿ.ಜೆ.ಪಿ!

ಕೊಪ್ಪಳ ಶಾಸಕ ಸಂಗಣ್ಣ ಕರಡಿಯವರು, ಬಿ.ಜೆ.ಪಿ ಸೇರುತ್ತಾರೆ ಎಂಬ ಗುಸುಗುಸು ಕಳೆದ ಅಕ್ಟೋಬರ್ ನಿಂದಲೇ ಕೇಳಿಬರುತ್ತಿತ್ತು. ಆದರೆ ರಾಜ್ಯಸಭೆ ಚುನಾವಣೆ ನಡೆದ ಕೂಡಲೇ ಬಿ.ಜೆ.ಪಿ ಬೋನಿಗೆ ಬಿದ್ದದ್ದು ಮಾತ್ರ ಸೋಜಿಗ.
ಬಿ.ಜೆ.ಪಿ ಆಪರೇಶನ್ ಲೀಸ್ಟ್ ನಲ್ಲಿ ಇನ್ನು ಕೆಲವು ಶಾಸಕರ ಹೆಸರು ಕೇಳಿಬರುತ್ತಿದೆ. ಅದರಲ್ಲಿ ಸುಭಾಷ್ ಗುತ್ತೇದಾರ್, ನಾಡಗೌಡ ವೆಂಕಟರಾವ್ ಮತ್ತು ಬಸವರಾಜನ್ ಪ್ರಮುಖರು.
ಏನೇ ಇರಲಿ ಏನೇನೋ ಅವಾಂತರಗಳನ್ನು ಮಾಡಿಕೊಂಡು, ಸರಕಾರವನ್ನು ಉರುಳಿಸುವ ಪ್ರಯತ್ನ ಮಾಡುತ್ತಿದ್ದ ಜೆ.ಡಿ.ಎಸ್, ಅದರ ಫಲವನ್ನು ಉಣ್ಣುತ್ತಿದೆ. ಹೀಗೆ ಮುಂದುವರೆದರೆ ದಳಕ್ಕೆ, ಪ್ರತಿಪಕ್ಷ ಸ್ಥಾನ ಉಳಿಯುವುದು ಕೂಡ ಅನುಮಾನ. ಅದು ಅವರ ಪ್ರಾರಬ್ಧ, ಅನುಭವಿಸಲಿ ಬಿಡಿ!
ಸದಾ ಹೋಮ, ಹವನ ಮಾಡಿ ಕಾಲಕಳೆಯುತ್ತಿದ್ದ ಯಡ್ಡಿಯವರಿಗೆ, ಇನ್ನು ಮುಂದೆ ಹೋಮಕ್ಕೆ ಜೇನುತುಪ್ಪದ problem ಬರಲಿಕ್ಕಿಲ್ಲ. ಯಾಕೆಂದರೆ ಜೇನುತುಪ್ಪ ಸಂಗ್ರಹಿಸಲು ಕರಡಿಯಿದೆಯಲ್ಲವೇ?
ಹಾಗೇ ಸುಮ್ಮನೆ- ಜೆ.ಡಿ.ಎಸ್ ಶಾಸಕ ಕರಡಿಯವರು, ಬಿ.ಜೆ.ಪಿ ಸೇರಿರುವುದರಿಂದ, ಸರಕಾರಕ್ಕೆ ಇನ್ನು ದೃಷ್ಟಿ ತಾಗುವುದಿಲ್ಲ ಎಂಬುವುದು ಉಮೇಶನ ನಂಬಿಕೆ. ಯಾಕೆಂದರೆ ಕರಡಿ ರೋಮವನ್ನು, ತಾಯತ ಮಾಡಿ ಕಟ್ಟಿದರೆ, ಆ ವ್ಯಕ್ತಿಗೆ ಏನೂ ಆಗುವುದಿಲ್ಲ ಎಂಬ ನಂಬಿಕೆಯಿದೆ.ಈಗ ಕರಡಿಯೇ ಬಿ.ಜೆ.ಪಿ ಕಡೆ ಇರೋದರಿಂದ, ಬೇಕಾದಷ್ಟು ತಾಯತ ಸಿಗಬಹುದು ಅಲ್ಲವೇ?
-ಡಾ.ಶೆಟ್ಟಿ
gud 1!!!:)
ReplyDelete