ಯಪ್ಪಾ! ನಮ್ಮೂರಲ್ಲಿ ಹಿಂಗೆಲ್ಲಾ ಇಲ್ಲಪ್ಪಾ!!!

ಜಪಾನ್ನಲ್ಲಿ ಮಾರ್ಚ್ 11 ರಂದು ನಡೆದ ಸುನಾಮಿ ಭೂಕಂಪನಗಳಿಂದ ಜೀವ ಹಾನಿಯೊಂದಿಗೆ ಎದ್ದು ನಿಲ್ಲಲಾಗದ ರೀತಿಯಲ್ಲಿ ಕುಸಿದು ಬಿದ್ದಂತೆ ದೇಶದ ಸ್ಥಿತಿಯು ಕಾಣುತ್ತಿತ್ತು. ಆದರೆ ಅವರು ನಮ್ಮವರಂತಲ್ಲ. ಜಪಾನಿನ ನಾಕಾದ ಗ್ರೇಟ್ ಕಾಂಟೋ ಹೆದ್ದಾರಿ ಸುನಾಮಿ ಭೂಕಂಪದಿಂದ ಛಿದ್ರಗೊಂಡಿದ್ದರೂ ಮಾರ್ಚ್ 17 ರಂದು ಶುರು ಹಚ್ಚಿದ ದುರಸ್ತಿ ಕಾರ್ಯವು ಮತ್ತೆ ಆರೇ ದಿನಗಳಲ್ಲಿ ಪೂರ್ಣಗೊಂಡು ಮೊದಲಿನಂತೆ ಕಂಗೊಳಿಸುತ್ತಿದೆ. ಇದನ್ನು ಸರಿಯಾಗಿ ಗಮನಿಸಿದಾಗ ಜಪಾನ್ ಗೆ ಜಪಾನ್ ಮಾತ್ರ ಸಾಟಿ ಎನ್ನಬಹುದು.
ಯಾವುದೇ ಕಾರ್ಯಗಳು ಆಗಬೇಕು ಎಂದಿದ್ದಲ್ಲಿ ದೃಢ ನಿಶ್ಚಯ ಮತ್ತು Hard work ಇದ್ದರೆ ಅದು ಆಗಿಯೇ ತೀರುತ್ತದೆ.
ನಮ್ಮಲ್ಲಿ ಯಾಕೆ ಇಂತಹ ಚುರುಕು ಕೆಲಸಗಳು ನಡೆಯುತ್ತಿಲ್ಲ? ನಮ್ಮಲ್ಲಿರುವ ದೋಷವಾದರೂ ಏನು? ಮುಕ್ತಿಯಾದರೂ ಹೇಗೆ? ನಮ್ಮ ಜನರು ಕಣ್ಣಿಗೆ ಬ್ರಹ್ಮ ಗಂಟನ್ನೇ ಕಟ್ಟಿದ ಕಣ್ಣು ಪಟ್ಟಿಯನ್ನು ಕಟ್ಟಿ ಕುಳಿತ್ತಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.
-ಕೆ.ಪಿ.ಭಟ್
Superub write, keepitup
ReplyDeleteCheers!!!
Kumz & Swa