Thursday, March 3, 2011

ವಿಶ್ವಕಪ್ ಆಘಾತ  
ಅದು 1983 , ಭಾರತ, ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದು ಕೊಂಡಾಗ ಇಡೀ ವಿಶ್ವವೇ  ನಿಬ್ಬೆರಗಾಗಿತ್ತು. ಆವತ್ತಿನ ದಿನಕ್ಕೆ ಭಾರತ ತಂಡವನ್ನು ವರ್ಲ್ಡ್ ಕ್ರಿಕೆಟ್ ನ ಶಿಶು ಗಳು ಎಂದೇ ಪರಿಗಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತ ವಿಶ್ವಕಪ್  ಗೆದ್ದಿದ್ದು, ಒಂದು ವಿಶ್ವಕಪ್ ಆಘಾತ.
ಇದಾದ ಮೇಲೆ ನಂತರದ ಸಾಲಿನಲ್ಲಿ, ವಿಶ್ವಕಪ್ ಕಿರೀಟವನ್ನೇ ಮುಡಿಗೇರಿಸುವ ಆಘಾತಗಳು ನಡೆದಿಲ್ಲವಾದರೂ, ಲೀಗ್ ಪಂದ್ಯಗಳಲ್ಲಿ ಕೆಲವು ಆಘಾತಗಳು ನಡೆದಿದೆ. ಜಿಂಬಾಬ್ವೆ ಭಾರತವನ್ನು ಸೋಲಿಸಿದ್ದು, ಕೀನ್ಯ ಶ್ರೀಲಂಕಾವನ್ನು ಪರಾಭವಗೊಳಿಸಿದ್ದು, ಬಾಂಗ್ಲಾ ಭಾರತದ ವಿರುದ್ದ ಜಯಭೇರಿ ಬಾರಿಸಿದ್ದು, ಐಯರ್ಲ್ಯಾಂಡ್ ಪಾಕಿಗಳ ಸೊಕ್ಕು ಮುರಿದಿದ್ದು. ಆದರೆ ಇವೆಲ್ಲಾ ಬಹಳಾ ಆಘಾತಕಾರಿಯಾಗಿ ಕಂಡಿರಲಿಲ್ಲ. 
ನಿನ್ನೆ (2-3-2011 ) ನಡೆದ ಐರಿಷ್ ಮತ್ತು ಇಂಗ್ಲೀಷ್ ದಾಯಾದಿಗಳ ಕದನದಲ್ಲಿ ಐರಿಷ್  ಶಿಶುಗಳು, ಬಹಳ ಅಚ್ಚರಿ ಪಡುವ ರೀತಿಯಲ್ಲಿ ಇಂಗ್ಲೀಷ್ ರನ್ನು  ಸೋಲಿಸಿದ್ದಾರೆ. ಇದೇನು ಸಾಮಾನ್ಯ ಗೆಲುವಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೇಂಡ್  ತಂಡ  ಬರೋಬ್ಬರಿ 327 ರನ್  ಪೇರಿಸಿ ಗೆಲುವು ನಮ್ಮದೇ ಎಂಬ ಓವರ್ ಕಾನ್ಫಿಡೆನ್ಸ್ ನಲ್ಲಿ ಬೀಗಿದ್ದರು. ಇದರಂತೆಯೇ ಐರಿಷ್  ತಂಡವು ಮೊದಲಿನಿಂದಲೇ ಸರಾಗವಾಗಿ ವಿಕೆಟ್ ಕಳೆಕೊಲ್ಲುತ್ತಾ ಹೋಯಿತು. 111 -5 ವಿಕೆಟ್ ಹೋಗುವಲ್ಲಿಯವರೆಗೆ, ಇಂಗ್ಲೇಂಡ್ ಅವರ ಮೊಗದಲ್ಲಿ ಅದೇನು ಅಹಂ, ಅದೇನು ಇಗೋ!
 ಆದರೆ ಜಸ್ಟಿನ್ ಒಬ್ರೇನ್ ಯಾವಾಗ ಮೈದಾನಕ್ಕೆ ಇಳಿದನೋ, ಆಗ ಶುರುವಾಗಿತ್ತು ಇಂಗ್ಲೆಂಡ್ ತಂಡದವರ ಬೆವರಿಳಿಯಲು. ಕೇವಲ 50 ಎಸೆತದಲ್ಲಿ 100 ರನ್ ಗಳನ್ನು  ಗಳಿಸಿದಾಗ ಎದುರಾಳಿ ತಂಡದ ಜಂಘಾ ಬಲವೇ  ಕುಸಿದು ಹೋಗಿತ್ತು. ಕೊನೆಗೆ ತುಸು ಆಶಾವಾದದ ಭರವಸೆ ದೊರೆತರೂ ಸೋಲು ತಪ್ಪಿಸಿಕೊಳ್ಳಲಾಗಲಿಲ್ಲ. ಈವರೆಗೆ ನಡೆದ ವಿಶ್ವಕಪ್ ಗಳಲ್ಲಿ 328 ರನ್ ಚೇಸ್ ಅತ್ಯಂತ ಶ್ರೇಷ್ಠ ರನ್ ಚೇಸ್ ಆಗಿ ಇತಿಹಾಸದ ಪುಟ ಸೇರಿಕೊಂಡಿತು. ಹೊಸ ಆಘಾತ ಐರಿಶ್ ತಂಡ ವಿಶ್ವ ಕ್ರಿಕೆಟ್ ಗೆ ನೀಡಿತು. 
ಓವರ್ ಕಾನ್ಫಿಡೆನ್ಸ್ ನಿಂದಾಗಿ,  ಕಳಪೆ ಫೀಲ್ಡಿಂಗ್ ಮತ್ತು ಬೌಲಿಂಗ್ ನಿಂದಾಗಿ ಯಾವ ಬಲಿಷ್ಠ ತಂಡವೂ ಸೋಲಿನ ಸುಳಿಯಲ್ಲಿ ಸಿಲುಕುತ್ತದೆ ಎನ್ನುವುದಕ್ಕೆ ಬೆಂಗಳೂರು ಚಿನ್ನ ಸ್ವಾಮೀ ಕ್ರೀಡಾಂಗಣ ಸಾಕ್ಷಿಯಾಯಿತು.  
                                              -ಡಾ. ಶ್ರೇ  

No comments:

Post a Comment