Tuesday, March 8, 2011

ಅರುಣಾ 
ನೋವುಗಳಲ್ಲೇ ಮಿಂದು, ನೊಂದ ಬಿಸಿ ದ್ರವದಲ್ಲಿ ಕುದಿದು, ಮಾನಸಿಕ ಮತ್ತು ದೈಹಿಕವಾಗಿ ಈ ಲೋಕದಲ್ಲಿ ಬಾಳಲು ಸಾಧ್ಯವೇ ಇಲ್ಲ ಎನ್ನುವ ಸ್ಥಿರತೆ. ಬದುಕಿನ ಬಗೆಗೆ ಸಹಜವಾಗಿ ಮೂಡುವ ಮತ್ತು ಸ್ವಲ್ಪ ಸೂಕ್ಷ್ಮವಾಗಿ ಹೇಳುವುದಾದರೆ, ಮೂಡಲೇಬೇಕಾದ ಅವ್ಯಕ್ತ ತಿರಸ್ಕಾರ. ಇದು ನಮ್ಮ ನಡುವೆ ಇರುವ ವಿರಳ, ಮಾನಸಿಕ ಮತ್ತು ದೈಹಿಕ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಸ್ಥಿತಿ. 
ಅರುಣಾ ಶಾನಭಾಗ್ ಈಗ 'ಪ್ರಚಾರ'ದಲ್ಲಿ  ಇರುವ ವ್ಯಕ್ತಿ. 37 ವರುಷಗಳ ಹಿಂದೆ ಮುಂಬಯಿಯ  ಕೆ.ಇ.ಎಂ  ಆಸ್ಪತ್ರೆಯಲ್ಲಿ ನಿಷ್ಠಾವಂತೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಈಕೆಯ ಮೇಲೆ ಸೋಹನ್ ಲಾಲ್ ಎಂಬಾತ ಅಟ್ಯಾಕ್ ಮಾಡಿ ರೇಪ್ ಮಾಡಿದ್ದ. ಆಕೆಯ ಮೇಲೆ ಈತನಿಗಿದ್ದ ಸೇಡು ಈ ಕಾರ್ಯಕ್ಕೆ ಕಾರಣ. ಅವನ ಕೇವಲ ಒಂದು ಸಣ್ಣ ಸೇಡು! ಅವಳ ಜೀವನವಿಡೀ ನೋವಿನ ಸೊಗಡು.. ಅಂದಿನ ದಿನ ಅವನ ಹೊಡೆತದಿಂದ ಆಕೆಯ ಮೆದುಳೇ ನಿಷ್ಕ್ರಿಯವಾಗಿದೆ. ಕೇವಲ ಹಾಸಿಗೆಯೆ ಅವಳ ಸಂಗಾತಿ. ಆವತ್ತಿನಿಂದ ಇವತ್ತಿನವರೆಗೆ. ಆದರೂ ಕೆಲವು ಬಾರಿ ಪುರುಷನ ನೆರಳು ಕಂಡರೆ ಭಯ ಬೀಳುತ್ತಾಳೆ. 'ನಿಷ್ಕ್ರಿಯತೆ'. ಅದೆಂತ ಗಾಢವಾದಂತಹ ನೋವು ಇವಳದ್ದಿರಬಹುದು? 
ಅರುಣಾಳ ಕಷ್ಟವನ್ನು ಗಮನಿಸಿ ಅವಳ ಗೆಳತಿ, ಅರುಣಾ ಬದುಕಲು ಸಾಧ್ಯವೇ ಇಲ್ಲ ಎಂಬುವುದನ್ನು ಅರಿತ ಮೇಲೆ, ದಯಾ ಮರಣಕ್ಕಾಗಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿದಳು. ದಯಾ ಮರಣ ಕೆಲವು ಸಂದರ್ಭದಲ್ಲಿ ನೀಡಬಹುದು ಎಂಬ ಧೋರಣೆ ಕೋರ್ಟ್ ಗರ್ಭದಲ್ಲಿ ಹುದುಗಿದ್ದರೂ, ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ. ಮತ್ತೆ ಆಕೆಯ ಸ್ಥಿತಿ ಡೋಲಾಯಮಾನವಾಗಿದೆ. ಆಕೆಯನ್ನು ನೋಡಿಕೊಳ್ಳುವ ನರ್ಸ್ ಗಳು ದಯಾಮರಣಕ್ಕೆ ವಿರೋಧ! It is just because of psychological attachment towards the medicine. ಎಂದು ವ್ಯಾಖ್ಯಾನ ಮಾಡಬಹುದು. But if a person have real psychological touch with the other person's heart he/she would have been agreed for mercy killing. 
ಇದರ ಬಗ್ಗೆ ಜಾಸ್ತಿ ತಿಳಿಯಲು Guzarish ಸಿನೆಮಾ ನೋಡಿ. ಆಗಾದರು ಸಾವಿನ ಮೌಲ್ಯ ಅರಿವಾದೀತು.  
                                                                                        -ಡಾ.ಶ್ರೇ                                               

No comments:

Post a Comment