Wednesday, March 2, 2011

ಸತ್ತು ಹೋದ ವ್ಯಕ್ತಿ ಸತ್ಯವನ್ನು ಎತ್ತಿ ತೋರಿಸಿದ್ದ 
ಯಾವುದಾದರು ಒಂದು ಉನ್ನತ ಕಾರ್ಯ ನಡೆಯಬೇಕು ಎಂದಿದ್ದರೆ, ಅಷ್ಟೇ ಪ್ರಮಾಣದ ಸೋಲುಗಳು, ನೋವುಗಳು ಮಾಮೂಲು. 
ಒಂದು ಪತ್ರಿಕೆಯನ್ನು ಸ್ಥಾಪಿಸುವ ಉದ್ದೇಶಗಳು ಹಲವು ಇರುತ್ತದೆ. ಎಷ್ಟೋ ಸಂದರ್ಭ ಸತ್ಯವನ್ನು ಎತ್ತಿ ತೋರಿಸಲು ಆಗಿರಬಹುದು. ಕೆಲವೊಮ್ಮೆ ತಮ್ಮ ಮುಖವಾಡಗಳು ಕಳಚಿ ಹೋದಂತೆ ಒಂದು ಪ್ರಯತ್ನವಾಗಿರಬಹುದು. 
1780 ಜನವರಿ 29 ರಂದು ಭಾರತದ ಮೊದಲ ಮುದ್ರಿತ ಪತ್ರಿಕೆಯಾಗಿ ಬಂದಂತಹ ಬೆಂಗಾಲ್ ಗೆಜೆಟ್ ಎಂಬ ವಾರಪತ್ರಿಕೆ ಇದರ ಸಂಪಾದಕತ್ವ ವಹಿಸಿದವನು ಜೇಮ್ಸ್ ಅಗಸ್ಟಸ್ ಹಿಕಿ. 
ಇವನು ಹೆಚ್ಚು ಕಲಿತಿರಲಿಲ್ಲ. ಆದರೆ ಜೀವನಾನುಭವಗಳು ಆತನಿಗೆ ಹಾಸುಹೊಕ್ಕಾಗಿ ಇದ್ದುದ್ದರಿಂದ ಕಣ್ಣಿಗೆ ಕಂಡದನ್ನು ಕಣ್ಣು ಕಟ್ಟುವಂತೆ ಬರೆದು ಎಲ್ಲರ ಕಣ್ಣು ಕೆಂಪಾಗುವಂತೆ ಮಾಡುತ್ತಿದ್ದ. ಬ್ರಿಟೀಷ್ ಅಧಿಕಾರಿಗಳ ಖಾಸಗಿ ಜೀವನದ ನಿಂದನೆಗೆ ಹೆಚ್ಚು ಸ್ಥಳಾವಕಾಶ ಮೀಸಲಿರಿಸಿಟ್ಟಿದ್ದ. ನಂತರದ ದಿನಗಳಲ್ಲಿ ಸೆರೆಮನೆ ಶಿಕ್ಷೆಯೊಂದಿಗೆ ಹಲವು ರೂಪಾಯಿಗಳ ದಂಡ ಕೂಡ ವಿಧಿಸಲಾಯಿತು. ಸೆರೆಮನೆಯಲ್ಲಿ ತನ್ನ ಬರಹವನ್ನು ಮುಂದುವರೆಸಿದ ಈತ ಸರಕಾರದ ದಬ್ಬಾಳಿಕೆಯ ಎದುರಿಗೆ ಹೋರಾಡಲಾಗದೆ ಹಣದ ಅಭಾವದಿಂದಾಗಿ ತನ್ನ ಎಲ್ಲವುಗಳನ್ನೂ  ಕಳಕೊಂಡು ಬಡವನಾದ.
ಈಗ ಪತ್ರಿಕೆಗಳು ಅದೆಷ್ಟೋ ಪತ್ರಿಕಾ ಸ್ವತಂತ್ರ ಪಡಕೊಂಡರೂ, ಯಾವೊದೋ ಪಂಕ್ತಿ ಗೆ ವಾಲಿಕೊಂಡು ಯಾರೋ ಕೊಟ್ಟ ಭಿಕ್ಷೆಯನ್ನು ನೆಕ್ಕಿಕೊಂಡು, ಅವರ ಬೆನ್ನನ್ನು ಒರೆಸುವ ಪತ್ರಿಕೆ ಮತ್ತು ಪತ್ರಕರ್ತರಿಗೆ ಅದು ಯಾವ ರೀತಿಯ ಬೆಲೆ ಕೊಡಬೇಕು ಎನ್ನುವುದು ನೀವೇ ಯೋಚಿಸಿ.
ಸಮಾಜದ ಸೇವೆಯ ಜೊತೆಗೆ ಸತ್ಯವನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಪತ್ರಿಕೆಗಳು ಬೆಳೆಯಬೇಕು. ಕೇವಲ ಹಣ ಮಾಡುವುದೇ ಉದ್ದೇಶವಾಗಿದ್ದರೆ ನಿಮ್ಮ ಆಸಕ್ತಿಗೆ ತಕ್ಕಂತೆ ಸತ್ಯಗಳು ಹೊರಬೀಳಲು ಸಾಧ್ಯ ಅಷ್ಟೇ. ಇಲ್ಲಿ ಯಾರ ಒಲವೂ ನಿಮಗೆ ಬೇಕಿಲ್ಲ. 
ಹಿಕಿ ಯಾವ ರೀತಿಯ ವ್ಯಕ್ತಿ ಎನ್ನುವುದಕ್ಕಿಂತ ಮಿಗಿಲಾಗಿ ಭಾರತದ ಮೊತ್ತ ಮೊದಲ ಪತ್ರಿಕೆ ಸತ್ಯದ ಅನ್ವೇಷಣೆಯೊಂದಿಗೆ ಕ್ರಾಂತಿಯ ಪಥದಲ್ಲಿ ಮುಂದುವರಿದಿದ್ದು ನಿಜವಾಗಲು ಈಗ ಇತಿಹಾಸ.  
                                         - ಕೆ.ಪಿ.ಭಟ್ 

No comments:

Post a Comment