Monday, February 7, 2011

ಇಂಗ್ಲೀಷ್ ಎಂಬ ಭೂತ ಹೊಕ್ಕವರಿಗೆ ! 
ಆಂಗ್ಲ ಉಪನ್ಯಾಸಕರು ಕನ್ನಡವೆಂದರೆ ಕಾಲಿನ ಧೂಳಿನಂತೆ ಮಾಡುತ್ತಿರುವುದನ್ನು ನಾನು ದಿನೇ ನೋಡುತ್ತಿದ್ದೇನೆ. ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದ ಇವರಿಗೆ ಇಂದು ಕನ್ನಡ ಎಂದರೆ ಏನೋ ಒಂದು ರೀತಿಯ ತಾತ್ಸಾರ.
ಇವತ್ತು ಏನಾಗಿದೆ ಎಂದರೆ ಇಂಗ್ಲೀಷ್ ನಲ್ಲಿ ಮಾತನಾಡುವುದು standard ಎಂದಾಗಿದೆ. 77 ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನಗಳು ಕಳೆಯುತ್ತಿರಬೇಕಾದರೆ,ಇಂತಹುಗಳ ಬಗ್ಗೆ ಗಮನಿಸುವ ಅಗತ್ಯವಿದೆ.
shekespeare, shelley, wordsworth ರ ಸಾಹಿತ್ಯ ಓದಿದ ಕೂಡಲೇ ಎಲ್ಲಾ ತಿಳಿದುಕೊಂಡೆ ಎಂಬ ಭಾವನೆಯು ಇರುವುದರಿಂದ ಇಂತಹ ಅಲ್ಪವ್ಯಕ್ತಿತ್ವ ಹೊರಹೊಮ್ಮಲು ಸಾಧ್ಯ. ಬಿ.ಯಂ.ಶ್ರೀ, ಯು.ಆರ್. ಅನಂತಮೂರ್ತಿ ಅದೇನೇ ಇಂಗ್ಲೀಷ್ ಸಾಹಿತ್ಯ ಓದಿ ತಿಳಿದಿದ್ದರೂ, ಕನ್ನಡದಲ್ಲಿ ಹೆಮ್ಮೆಯಿಂದ ಬರಹಗಳನ್ನು ಸೃಷ್ಟಿಸಿದ್ದಾರೆ.
ಅಹಂನೊಂದಿಗೆ ಸಾಹಿತ್ಯಭ್ಯಾಸ ಬೇಡ, ಸಾಹಿತ್ಯ ಸಹಿತ ತಾಳ್ಮೆ ಅಗತ್ಯ. ಗಡ್ಡ ಬಿಟ್ಟು,ಅದನ್ನು ಕೆರೆದುಕೊಂಡ ಕೂಡಲೇ ಎಲ್ಲಾ ತಿಳಿದುಕೊಂಡವರೆಂದು ಭಾವಿಸಬೇಡಿ. ಓದುವುದು ತಿಳಿಯುವುದು ಬಹಳವಿದೆ. ನೀವು ನಿಮ್ಮ ಓದುವಿಕೆಯನ್ನು ನಿಲ್ಲಿಸಿ ದಶಕಗಳೇ ಕಳೆದಿವೆ, ಈಗ ಇನ್ನಷ್ಟು ಸಾಹಿತ್ಯ ಸೃಷ್ಟಿಯಾಗಿ ರಾಶಿ ಬಿದ್ದಿವೆ. ಕಣ್ಣು ಬಿಟ್ಟು ನೋಡಿ, ಮೂಗಿನ ನೇರಕ್ಕೆ ಮಾತನಾಡುವುದನ್ನು ಬಿಟ್ಟುಬಿಡಿ.
                                                                           ಕೆ.ಪಿ.ಭಟ್  

No comments:

Post a Comment